ನಕಲಿ ದಾಖಲೆ ಕೊಟ್ಟ ಶಾಲೆಗೆ ಅನುದಾನ: ಧಾರವಾಡ ಡಿಡಿಪಿಐ ಹುನ್ನಾರ…!?

ಧಾರವಾಡ: ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಶಾಲೆಯ ಅನುದಾನ ಬಿಡುಗಡೆ ಮಾಡುವುದಿಲ್ಲವೆಂದು ಹೇಳಿದ್ದ ಧಾರವಾಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು, ಈಗ ಅನುದಾನ ಬಿಡುಗಡೆ ಮಾಡಿಸಲು ಹುನ್ನಾರ ನಡೆಸಿದ್ದಾರೆಂದು ನೊಂದ ಶಿಕ್ಷಕರು ಹೇಳುತ್ತಿದ್ದಾರೆ.
ನಕಲಿ ದಾಖಲೆಯನ್ನ ಸೃಷ್ಟಿಸಿ, ವಿದ್ಯಾರ್ಥಿಗಳೇ ಇಲ್ಲದ ಶಾಲೆಗೆ ಅನುದಾನ ಬಿಡುಗಡೆ ಮಾಡುವ ಯತ್ನ ನಡೆದಾಗಲೇ ಹೋರಾಟ ಆರಂಭಗೊಂಡಿದೆ. ಆಗಲೂ, ಸರಿ ಮಾಡುತ್ತೇನೆ ಎನ್ನುತ್ತಿದ್ದ ಡಿಡಿಪಿಐ ಸಮಸ್ಯೆಯನ್ನ ಮತ್ತಷ್ಟು ಜಟಿಲ ಮಾಡುತ್ತಿದ್ದಾರಂತೆ.
ಪ್ರತಿಷ್ಠಿತ ಪತ್ರಿಕೆಯನ್ನೇ ದುರ್ಭಳಕೆ ಮಾಡಿಕೊಂಡಿರುವ ಬಗ್ಗೆ ಪತ್ರಿಕೆಯವರು ಸ್ಪಷ್ಟಣೆ ನೀಡಿದ್ದಾರೆ. ಆದರೂ, ಡಿಡಿಪಿಐ ಕೆಳದಿಮಠ ಅವರು, ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ನೊಂದ ಶಿಕ್ಷಕನ ಅಳಲು…