ಡಿವೈಎಸ್ಪಿ ವಿಜಯ ಬಿರಾದಾರ, ಎಂ.ಎಸ್.ಪಾಟೀಲ ಸೇರಿದಂತೆ 42 ಅಧಿಕಾರಿಗಳಿಗೆ ಸ್ಥಳ ನಿಯೋಜನೆ…!
1 min readಬೆಂಗಳೂರು: ಪೊಲೀಸ್ ಇನ್ಸಪೆಕ್ಟರ್ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ಹೊಂದಿದ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಹೈದ್ರಾಬಾದ್ ಕರ್ನಾಟಕದ 13 ಮತ್ತು ಇನ್ನುಳಿದ 29 ಡಿವೈಎಸ್ಪಿಗಳಿಗೆ ಸ್ಥಳಗಳನ್ನ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಧಾರವಾಡದ ಸಿಇಎನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿದ್ದ ವಿಜಯ ಬಿರಾದಾರ ಚುನಾವಣೆಯ ಸಂಬಂಧ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದ್ದು, ಅವರನ್ನ ಹಾವೇರಿಯ ಡಿಸಿಆರ್ ಬಿ ವಿಭಾಗಕ್ಕೆ ನಿಯೋಜನೆ ಮಾಡಲಾಗಿದೆ.
ಎಂ.ಎಸ್.ಪಾಟೀಲರನ್ನ ಡಿಸಿಆರ್ ಬಿ ಗದಗಗೆ, ಬಾಬುಸಾಹೇಬ ಹುಲ್ಲಣ್ಣನವರಿಗೆ ಹುಬ್ಬಳ್ಳಿ-ಧಾರವಾಡ ಸಿಸಿಆರ್ ಬಿಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.