Posts Slider

Karnataka Voice

Latest Kannada News

Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಇಂದು ಮಜಾ ಕೊಡುವ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು ‘ಊದಿಸಲು’ ಹರಸಾಹಸಪಟ್ಟ ಘಟನೆಯೊಂದು ನಡೆದಿದೆ.

ಹುಬ್ಬಳ್ಳಿ ಗಬ್ಬೂರ ಬಳಿಯಲ್ಲಿ ಸ್ವೀಟ್ ಪ್ಯಾಕ್ಟರಿಯಿಟ್ಟುಕೊಂಡಿರುವ ಬಸನಗೌಡ ಎಂಬಾತ, ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಯದ್ವಾತದ್ವಾ ಮಾತನಾಡಿದ್ದಾನೆ. ಹೀಗಾಗಿ, ಪೊಲೀಸರು ಆತನನ್ನ ತಪಾಸಣೆ ಮಾಡಿಸಲು ಸಂಚಾರಿ ಠಾಣೆ ಪೊಲೀಸರನ್ನ ಘಂಟಿಕೇರಿ ಪೊಲೀಸ್ ಠಾಣೆಗೆ ಕರೆಸಿದ್ದಾರೆ. ಆಗಲೇ ನಡೆದಿದ್ದು.. ಈ ಮಜಾ.. ವೀಡಿಯೋ ಇಲ್ಲಿದೆ ನೋಡಿ..

ಕಾನೂನಿನ ಪ್ರಕಾರ ಬ್ರೇಥ್ ಎನ್ ಲೈಜರ್ ಮಷೀನದಲ್ಲಿ ಊದಿಸಿದ ನಂತರ ಅದರಲ್ಲಿ ಬರುವ ಸಂಖ್ಯೆಗನುಗುಣವಾಗಿ ತಿಳಿಯಬೇಕಾಗುತ್ತದೆ. ಆದರೆ, ಬಸನಗೌಡ ಅದಕ್ಕೆ ಅವಕಾಶವನ್ನೇ ಕೊಡದೇ, ನಾನು ಕುಡಿದೇನಿ ಎಂದು ಹೇಳುತ್ತಲೆ ಟೈಂ ಪಾಸ್ ಮಾಡತೊಡಗಿದ್ದ.

ಪೊಲೀಸರ ತೀರಾ ಒತ್ತಾಯದ ನಂತರ ಬಸನಗೌಡ ಊದಿದ, ಮತ್ತು ಆತ ಕುಡಿದಿರುವ ಪ್ರಮಾಣವನ್ನ ಪತ್ತೆ ಹಚ್ಚಲು ಅನುಕೂಲವಾಗಿ, ಮುಂದಿನ ಪ್ರಕರಣವನ್ನ ದಾಖಲು ಮಾಡಲು ಪೊಲೀಸರಿಗೆ ಅನುಕೂಲವಾಗಿದೆ.


Spread the love

Leave a Reply

Your email address will not be published. Required fields are marked *