Posts Slider

Karnataka Voice

Latest Kannada News

ಡಾ.ಕ್ರಾಂತಿಕಿರಣರಿಂದ ಹೆಂಡತಿ ಕೊಲೆಗೆ ಸುಪಾರಿ- ಪತ್ನಿ ಡಾ.ಶೋಭಾ ದೂರು ದಾಖಲು…!

1 min read
Spread the love

ಹುಬ್ಬಳ್ಳಿ: ತಮ್ಮ ಪತಿ ತನ್ನನ್ನ ಕೊಲೆ ಮಾಡಿಸಲು ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆಂದು ಪತ್ನಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬಾಲಾಜಿ ಆಸ್ಪತ್ರೆಯ ಡಾ.ಕ್ರಾಂತಿಕಿರಣ ಅವರ ಪತ್ನಿಯಾದ ಡಾ.ಶೋಭಾ ಸುಣಗಾರ ಎಂಬುವವರೇ ದೂರನ್ನ ನೀಡಿದ್ದಾರೆ. ತನ್ನ ಪತಿಯ ಜೊತೆ ಮೂರ್ನಾಲ್ಕು ವರ್ಷದಿಂದ ಕೌಟುಂಬಿಕ ಭಿನ್ನಾಭಿಪ್ರಾಯಗಳಿವೆ. ಈ ಕಾರಣಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನ ಬಿಟ್ಟು ಕೊಡುವಂತೆ ಪೀಡಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತನ್ನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸುವ ಜೀವ ಬೆದರಿಕೆ ಹಾಕಿದ್ದಲ್ಲದೇ, ಜೋರಾಗಿ ಗೋಡೆಗೆ ದೂಡಿ, ಒಳಪೆಟ್ಟು ಆಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಬಾಲಾಜಿ ಆಸ್ಪತ್ರೆಯ ಅಕೌಂಟೆಂಟ್ ಮಹೇಶ್ವರಿ ಹೊಸಗೌಡರ ಕೂಡಾ ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ಶೋಭಾ ಸುಣಗಾರ ದೂರು ನೀಡಿದ್ದಾರೆ..

ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 1860 (ಯು/ಎಸ್- 323, 341, 506, 34) ಅಡಿ ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *