ಡಾ.ಕ್ರಾಂತಿಕಿರಣ ವಿರುದ್ಧ ಪತ್ನಿ ಡಾ. ಶೋಭಾ ದೂರು: ಪತ್ನಿ ದೂರಿಗೆ ಪತಿ ಪ್ರತ್ಯೇಕ ದೂರು…!
1 min readಹುಬ್ಬಳ್ಳಿ: ವಿದ್ಯಾನಗರದ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಕ್ರಾಂತಿಕಿರಣ ಹಾಗೂ ನಿರ್ದೇಶಕಿ ಡಾ.ಶೋಭಾ ಸುಣಗಾರ ಅವರು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರನ್ನ ಸಲ್ಲಿಸಿದ್ದು, ಒಬ್ಬರಿಗೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದನ್ನ ದೂರಿಕೊಂಡಿದ್ದಾರೆ.
ಬ್ಯಾಂಕಿನ ಎರಡು ಖಾತೆಗಳಿಂದ ಆಸ್ಪತ್ರೆಯ ನಿರ್ದೇಶಕಿ ಡಾ.ಶೋಭಾ 17 ಲಕ್ಷ ರೂಪಾಯಿಯನ್ನ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. 2018 ಸೆಪ್ಟೆಂಬರ್ 17 ರಂದು ಆಸ್ಪತ್ರೆಯ ಬ್ಯಾಂಕ್ ಖಾತೆಯಿಂದ 7 ಲಕ್ಷ ರೂ ಹಾಗೂ ಸೆಪ್ಟಂಬರ್ 24ರಂದು 10 ಲಕ್ಷ ವಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಡಾ.ಕ್ರಾಂತಿಕಿರಣ ದೂರಿನಲ್ಲಿ ದಾಖಲಿಸಿದ್ದಾರೆ.
ಅಷ್ಟೇ ಅಲ್ಲ, ನಕಲಿ ದಾಖಲೆಗಳನ್ನ ಸೃಷ್ಟಿಸಿ ಎಸ್ಟಿ ಮೀಸಲಾತಿಯಲ್ಲಿ ಬೆಳಗಾವಿಯ ಜೆಎನ್ಎಂಸಿ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆಯುವ ಮೂಲಕ ಸರ್ಕಾರದ ಸೌಲಭ್ಯವನ್ನ ದುರುಪಯೋಗ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ಡಾ.ಕ್ರಾಂತಿಕಿರಣ ತಿಳಿಸಿದ್ದಾರೆ.
ಪತ್ನಿಯ ದೂರಿನಲ್ಲಿ ಏನಿದೆ..
ಡಾ.ಕ್ರಾಂತಿ ಕಿರಣ ಅವರು ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ ಹಣ ದೋಚುವ ಸಂಚು ಎಸಗಿದ್ದಾರೆಂದು ದೂರು ನೀಡಿದ್ದಾರೆ.
ಯಾವುದೇ ಮೀಟಿಂಗ್ ನಡೆಯದೇ, ಆಸ್ಪತ್ರೆಯ ಬೋರ್ಡ್ ಆಫ್ ಡೈರೆಕ್ಟರ್ ಸಭೆಯಲ್ಲಿ ತೀರ್ಮಾನಿಸಿದ ನಡಾವಳಿಗೆ ಸಹಿ ಹಾಕದೇ ಇದ್ದರೂ 2018ರ ಮೇ 25 ರಂದು ಕಂಪನಿಯ ಲೆಟರ್ ಹೆಡ್ ನಲ್ಲಿ ತಾನೇ ತಯಾರಿಸಿದ ನಕಲಿ ಪತ್ರವನ್ನ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡಿ ಮೋಸ ಮಾಡಿದ್ದಾರೆಂದು ದೂರಿನಲ್ಲಿ ದಾಖಲು ಮಾಡಿದ್ದಾರೆ.
ಮದುವೆಯಾದಾಗಿನಿಂದ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆದು ದೈಹಿಕ, ಮಾಣಸಿಕ ಹಿಂಸೆ ನೀಡಿದ್ದಾರೆ. ಮನೆ ಮತ್ತು ಆಸ್ಪತ್ರೆಯಿಂದ ಹೊರ ಹಾಕಿದ್ದಲ್ಲದೇ, ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕಿನಿಂದ ಹಣ ದೋಚುವ ಸಂಚು ಎಸಗಿದ್ದಾರೆಂದು ಡಾ.ಶೋಭಾ ಸುಣಗಾರ ದೂರಿನಲ್ಲಿ ಹೇಳಿಕೊಂಡಿದ್ದಾರೆ.