“ಕಾಮದಾಟ-ರಾಸಲೀಲೆ”- ಹಣ ಕೇಳಿದ್ರು ಎಂದ ಡಾ.ಪ್ರಕಾಶ ರಾಮನಗೌಡರ, ಇನ್ನೂ ಯಾಕೆ ಕಂಪ್ಲೇಟ್ ಕೊಟ್ಟಿಲ್ಲ…!?

ಧಾರವಾಡ: ಜಿಲ್ಲೆಯ ಪ್ರತಿಷ್ಠಿತ ರಾಮನಗೌಡರ ದವಾಖಾನೆಯಲ್ಲೀಗ ರಾಸಲೀಲೆಯ ಪ್ರಕರಣವಾಗಿದೆ ಎಂಬ ಆರೋಪ ಬಂದಿದೆ. ಈ ಆರೋಪದ ವೀಡಿಯೋ ವೈರಲ್ ಆಗಿದ್ದೆ ತಡ, ಡಾ.ಪ್ರಕಾಶ ರಾಮನಗೌಡರ ಹೇಳಿಕೆ ಹೊರಬಿದ್ದಿದೆ. ಅವರ ಹೇಳಿಕೆಯ ವೀಡಿಯೋ ಇಲ್ಲಿದೆ ನೋಡಿ..
ಇಷ್ಟೇಲ್ಲಾ ಇವರಿಗೆ ಗೊತ್ತಾಗಿ ವೀಡಿಯೋ ಹೊರ ಬಂದ ನಂತರವೂ ಇಲ್ಲಿಯವರೆಗೆ ಡೀಲ್ಗೆ ಬಂದವರ ವಿರುದ್ಧ ಡಾ.ಪ್ರಕಾಶ ರಾಮನಗೌಡರ ದೂರು ನೀಡಿಲ್ಲ. ಅಷ್ಟೊಂದು ಭಯ ಇವರಿಗೆ ಏಕೆ ಎಂಬುದು ತಿಳಿಯುತ್ತಿಲ್ಲ.
ಡಾ.ಪ್ರಕಾಶ ರಾಮನಗೌಡರ ವಿರುದ್ಧ ಷಡ್ಯಂತ್ರ (ಆಗಿದ್ದರೇ) ಅಂತವರನ್ನ ಸಮಾಜದ ಮುಂದೆ ಬೆತ್ತಲು ಮಾಡಬೇಕಾದ ಅಗತ್ಯತೆ ಇನ್ನೂ ಡಾಕ್ಟರ್ಗೆ ಕಾಣದೇ ಇರುವುದು ಸೋಜಿಗವಾಗಿದೆ.
ಡಾ.ಪ್ರಕಾಶ ರಾಮನಗೌಡರ ಹೇಳಿಕೆಯ ಪ್ರಕಾರ “ಹಣಕ್ಕಾಗಿ ಬೇಡಿಕೆಯಿಟ್ಟವರ ವೀಡಿಯೋ, ಆಡೀಯೋ” ಇವೆ ಎಂದಿದ್ದಾರೆ. ಸಮಯ ಬಂದಾಗ ಹೊರ ಬಿಡುವುದಾಗಿ ಹೇಳಿದ್ದಾರೆ. ನಿಮ್ಮ ವೀಡಿಯೋ ಹೊರಗೆ ಬಂದಿದೆ ಮತ್ತೂ ನಿಮ್ಮದು ಕಾಮದಾಟ, ರಾಸಲೀಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ವೈರಲ್ ಆಗುತ್ತಿರುವ ವೀಡಿಯೋ ಈಗಾಗಲೇ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಈಗಲೂ ಡಾ.ಪ್ರಕಾಶ ರಾಮನಗೌಡರಿಗೆ ಡೀಲ್ಗೆ ಬಂದವರ ವೀಡಿಯೋ ಹೊರಗೆ ಹಾಕದೇ ಇರುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.