ಬಿಕ್ಕಿ ಬಿಕ್ಕಿ ಅತ್ತ ಡಾಕ್ಟರ್: ಅಷ್ಟು ಜನರೆದುರಿಗೆ ಹಾಗೇಕೆ ಮಾಡಿದ್ರು ಗೊತ್ತಾ..?
1 min readಉತ್ತರಕನ್ನಡ: ಇಂತಹದನ್ನ ನೀವೂ ಎಲ್ಲಿಯೂ ನೋಡಿರಲೂ ಸಾಧ್ಯವೇಯಿಲ್ಲ. ನೂರೆಂಟು ಜನರ ಪ್ರಾಣ ಉಳಿಸಿದ ಡಾಕ್ಟರ್, ನೂರು ಮಂದಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಎಲ್ಲರಿಗೂ ಸೋಜಿಗ ಮೂಡಿಸಿತ್ತಲ್ಲದೇ, ಕನಿಕರವೂ ಬರುವಂತಾಗಿತ್ತು.
ಹೇಗೆ ಅತ್ತರು ನೀವೇ ನೋಡಿ
ಆಗಿದ್ದೇನೆಂದರೇ, ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ವೈದ್ಯರ ತನಿಖೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಆಸ್ಪತ್ರೆ ಸರ್ಜನ್ ಶಿವಾನಂದ ಕುಡ್ತಲಕರ್ ವಿಚಾರಣೆಗೆ ಹಾಜರಾಗಿದ್ರು. ಸರ್ಜನ್ ವಿಚಾರಣೆಗೆ ಹಾಜರಾಗಿರುವ ವಿಷಯ ತಿಳಿದ ಮೀನುಗಾರರು ಜಿಲ್ಲಾ ಪಂಚಾಯತ ಕಚೇರಿ ಎದುರು ಜಮಾಯಿಸಿದ್ರು. ವಿಚಾರಣೆ ಮುಗಿಸಿ ಹೊರ ಬಂದ ಸರ್ಜನ್ ಶಿವಾನಂದ ಕುಡ್ತಲಕರ್ ಸೇರಿದ್ದ ಜನರ ಎದುರು ಬಾಣಂತಿ ಸಾವಿನಲ್ಲಿ ನನ್ನದೇನು ತಪ್ಪಿಲ್ಲ ಎಂದು ಜನ್ರ ಎದುರೆ ಕಣ್ಣೀರು ಸುರಿಸಿದ್ರು. ತನ್ನ ತಪ್ಪಿನಿಂದ ಬಾಣಂತಿ ಗೀತಾ ಸಾವನಪ್ಪಿಲ್ಲ. ಯಾವ ಶಿಕ್ಷೆ ಕೊಟ್ಟರು ನಾನು ಎದುರಿಸಲು ಸಿದ್ಧನಿದ್ದೀನಿ. ಅನಾವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ… ದಯವಿಟ್ಟು ಕ್ಷಮಿಸಿ ಅಂತಾ ಹೇಳಿದ್ರು.
ಡಾಕ್ಟರ್ ಹೇಳಿದ ಮಾತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ರು ವೈದ್ಯರನ್ನ ಸಮಧಾನ ಪಡಿಸಿ ಕರೆದುಕೊಂಡು ಹೋದರು.