Posts Slider

Karnataka Voice

Latest Kannada News

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹುಬ್ಬಳ್ಳಿಯಲ್ಲಿ: ಕೊರೋನಾ ನಿಯಮಾವಳಿಗಳು ಮಾಯ…!

Spread the love

ಹುಬ್ಬಳ್ಳಿ: ಕೊರೋನಾ ಮಹಾಮಾರಿಯನ್ನ ಕಡಿಮೆ ಮಾಡಬೇಕೆಂದರೇ, ಎಲ್ಲರೂ ಸಹಕಾರ ಮಾಡಬೇಕೆಂದು ಪ್ರತಿ ದಿನವೂ ಸರಕಾರ ಬಡಿದುಕೊಂಡರೂ, ಪ್ರಮುಖರು ಬಂದ ತಕ್ಷಣವೇ ಕೊರೋನಾನೇ ಮಾಯವಾಗಿಬಿಡುತ್ತೆ ಎನ್ನುವ ರೀತಿಯಲ್ಲಿ ವರ್ತಿಸುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಂದಾಗಲೂ ಅದೇ ಸ್ಥಿತಿ ನಿರ್ಮಾಣವಾಗಿತ್ತು.

ಹುಬ್ಬಳ್ಳಿಯ ಮದರ ಥೆರೇಸಾ ಪ್ರತಿಮೆಯ ಬಳಿ ಕಾಂಗ್ರೆಸ್ ನಾಯಕರು ಆರಂಭಿಸಿರುವ ವಾಹನಗಳನ್ನ ಉದ್ಘಾಟನೆ ಮಾಡಲು ಬಂದಿದ್ದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಸಾಮಾಜಿಕ ಅಂತರವನ್ನ ಎಲ್ಲರೂ ಮರೆತಿದ್ದರು.

ಪ್ರತಿದಿನ ಭಾರತೀಯ ಜನತಾ ಪಕ್ಷದವರ ತಪ್ಪುಗಳನ್ನ ಒಂದೊಂದಾಗಿ ಟೀಕೆ ಮಾಡುವ ಕಾಂಗ್ರೆಸ್ ನವರು ಕೂಡಾ ಅದನ್ನೇ ಮಾಡುತ್ತಿದ್ದು ಕಂಡು ಬಂದಿತು. ಬೆಂಗಳೂರು ಹೊರತುಪಡಿಸಿದರೇ, ಧಾರವಾಡ ಜಿಲ್ಲೆಯಲ್ಲೇ ಕೊರೋನಾ ಸೋಂಕಿತರು ಸಾವುಗಳು ಹೆಚ್ಚಾಗಿವೆಯಾದರೂ, ಕಾಂಗ್ರೆಸ್ ಲೆಕ್ಕಾಚಾರವೇ ವಿಚಿತ್ರ.

ತಾನು ಮಾಡುವುದನ್ನ ಕಲಿತು ಮತ್ತೋಬ್ಬರಿಗೆ ಹೇಳುವುದು ಒಳ್ಳೆಯದು. ಕೆಲವರಂತೂ ಮಾಸ್ಕನ್ನೂ ಸರಿಯಾಗಿ ಹಾಕಿಕೊಳ್ಳದೇ ಇರುವುದು ಕಂಡು ಬಂದಿತು.


Spread the love

Leave a Reply

Your email address will not be published. Required fields are marked *