ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ “ಅಖಾಡಾದ” ಹಿಂದೆ ಬಿಜೆಪಿ-ಕಾಂಗ್ರೆಸ್ ಲೀಡರ್ ಇದ್ದಾರಾ…!? ಅವರು ಯಾರೂ ಗೊತ್ತಾ…!?
1 min readಧಾರವಾಡ: ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಮುನ್ನವೇ ರಾಜ್ಯದಲ್ಲಿ ಸದ್ದು ಮಾಡಿರುವ ಧಾರವಾಡ ಲೋಕಸಭಾ ಕ್ಷೇತ್ರ, ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಕಣಕ್ಕೀಳಿಯುವ ಮೂಲಕ ರೋಚಕ ತಿರುವು ಪಡೆಯುತ್ತಿದೆ.
ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಚುನಾವಣೆಯ ಅಖಾಡದಲ್ಲಿ ಧುಮುಕಲು ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ತೆರೆಮರೆಯಲ್ಲಿದ್ದಾರೆ ಎಂಬ ಗೌಪ್ಯತೆ ರಹಸ್ಯವಾಗಿ ಉಳಿದಿಲ್ಲ.
ಭಾರತೀಯ ಜನತಾ ಪಕ್ಷದಲ್ಲಿದ್ದು ಎಂಎಲ್ಸಿಯಾಗಿ ತದನಂತರ ಕಾಂಗ್ರೆಸ್ ಸೇರಿರುವ ಹಾಲಿ ಕಾಂಗ್ರೆಸ್ ಮುಖಂಡ ಮುಂಚೂಣಿಯಲ್ಲಿದ್ದಾರೆ. ಇದರ ಜೊತೆಗೆ ಬಿಜೆಪಿಯಿಂದ ಲೋಕಸಭಾ ಕ್ಯಾಂಡಿಡೇಟ್ ಆಗಿಯೇ ಬಿಟ್ಟೆ ಎಂದುಕೊಂಡಿದ್ದ ಕೋಷ್ಠದ ಪ್ರಮುಖ, ಓರ್ವ ಮಾಜಿ ಶಾಸಕ, ಯುವ ಮುಖಂಡ ಹಿನ್ನೆಲೆಯಲ್ಲಿ ಇದ್ದಾರೆಂದು ಹೇಳಲಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಜೊತೆಗಿದ್ದು, ಶ್ರೀಗಳ ಬೆನ್ನಿಗೂ ಇರುವುದು ಹಲವರಿಗೆ ಗೊತ್ತಾಗಿದೆ. ಇಂತಹ ರಾಜಕೀಯ ಧಾರವಾಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಂಡು ಬರುತ್ತಿದೆ.