Posts Slider

Karnataka Voice

Latest Kannada News

“ಏನೂ ಮಾಡೋಕಾಗಲ್ಲಾ”- ಹೀಗೇಕಂದ್ರು ವಿನಯ ಕುಲಕರ್ಣಿ…!

Spread the love

ಧಾರವಾಡ: ಕಳೆದ ನವೆಂಬರ್ 5ರಿಂದ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ಇಂದು ತಮ್ಮ ಮಡದಿಯ ಹೆಸರಿಗೆ ಜಿಪಿಎ ಮಾಡಲು ಬಂದಿದ್ದು, ಬ್ಯಾಂಕಿನ್ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲು ನ್ಯಾಯಾಲಯದ ಆದೇಶ ಪಡೆದು ಬಂದಿದ್ದರು.

ಈ ಸಮಯದಲ್ಲಿ ಧಾರವಾಡದ ಹಳೇ ಡಿಎಸ್ಪಿ ವೃತ್ತದ ಬಳಿ ಬ್ಯಾಂಕಿಗೆ ಹೋಗುವ ಮುನ್ನ ಮಾಜಿ ಸಚಿವ ವಿನಯ ಕುಲಕರ್ಣಿ ವ್ಯಕ್ತಿಯೊಬ್ಬರಿಗೆ ಕೈ ಕುಲುಕಿ ‘ಏನೂ ಮಾಡೋಕಾಗಲ್ಲಾ’ ಎನ್ನುತ್ತಲೇ ಮುಂದೆ ನಡೆದರು. ಇಲ್ಲಿದೆ ನೋಡಿ ವೀಡಿಯೋ..

https://www.youtube.com/watch?v=DAIGt4qMkq8

ನೂರಾರೂ ಜನರು ವಿನಯ ಕುಲಕರ್ಣಿಯವರ ಯೋಗಕ್ಷೇಮವನ್ನ ವಿಚಾರಣೆ ಮಾಡುವುದು ಕೂಡಾ ಕಂಡು ಬಂದಿತು. ಆದರೆ, ವಿನಯ ಕುಲಕರ್ಣಿಯವರು ಹಸನ್ಮುಖಿಯಾಗಿ ಎಲ್ಲರಿಗೂ ವಂದಿಸುತ್ತಾ ನಡೆದರು.


Spread the love

Leave a Reply

Your email address will not be published. Required fields are marked *