“ಏನೂ ಮಾಡೋಕಾಗಲ್ಲಾ”- ಹೀಗೇಕಂದ್ರು ವಿನಯ ಕುಲಕರ್ಣಿ…!

ಧಾರವಾಡ: ಕಳೆದ ನವೆಂಬರ್ 5ರಿಂದ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ಇಂದು ತಮ್ಮ ಮಡದಿಯ ಹೆಸರಿಗೆ ಜಿಪಿಎ ಮಾಡಲು ಬಂದಿದ್ದು, ಬ್ಯಾಂಕಿನ್ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಲು ನ್ಯಾಯಾಲಯದ ಆದೇಶ ಪಡೆದು ಬಂದಿದ್ದರು.
ಈ ಸಮಯದಲ್ಲಿ ಧಾರವಾಡದ ಹಳೇ ಡಿಎಸ್ಪಿ ವೃತ್ತದ ಬಳಿ ಬ್ಯಾಂಕಿಗೆ ಹೋಗುವ ಮುನ್ನ ಮಾಜಿ ಸಚಿವ ವಿನಯ ಕುಲಕರ್ಣಿ ವ್ಯಕ್ತಿಯೊಬ್ಬರಿಗೆ ಕೈ ಕುಲುಕಿ ‘ಏನೂ ಮಾಡೋಕಾಗಲ್ಲಾ’ ಎನ್ನುತ್ತಲೇ ಮುಂದೆ ನಡೆದರು. ಇಲ್ಲಿದೆ ನೋಡಿ ವೀಡಿಯೋ..
ನೂರಾರೂ ಜನರು ವಿನಯ ಕುಲಕರ್ಣಿಯವರ ಯೋಗಕ್ಷೇಮವನ್ನ ವಿಚಾರಣೆ ಮಾಡುವುದು ಕೂಡಾ ಕಂಡು ಬಂದಿತು. ಆದರೆ, ವಿನಯ ಕುಲಕರ್ಣಿಯವರು ಹಸನ್ಮುಖಿಯಾಗಿ ಎಲ್ಲರಿಗೂ ವಂದಿಸುತ್ತಾ ನಡೆದರು.