Posts Slider

Karnataka Voice

Latest Kannada News

ಧಾರವಾಡ ವಿದ್ಯಾಗಿರಿ ಠಾಣೆ “ಹೊನ್ನಪ್ಪನವರ ಮೇಲೆ ಕೇಸ್”- ಏನದು ರಹಸ್ಯ…

Spread the love

ಧಾರವಾಡ: ನಗರದಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಹಣದ ಬೇಡಿಕೆಯಿಟ್ಟಿದ್ದರು ಎಂಬ ಆರೋಪದಡಿ ಧಾರವಾಡ ವಿದ್ಯಾಗಿರಿ ಠಾಣೆಯ ಹೊನ್ನಪ್ಪನವರ ಮೇಲೆ ಪ್ರಕರಣ ದಾಖಲಾಗಿದೆ.

ಕಳೆದ ಎಂಟು ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಪ್ಪನವರ ರಾಜಸ್ಥಾನದ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ, ಮರಳಿದ್ದಾರೆ.

ಹಬ್ಬಿರುವ ವದಂತಿ ಏನು ಗೊತ್ತಾ…

ಸ್ಥಳೀಯ ಯುವತಿಯೋರ್ವಳನ್ನ ಮದುವೆಯಾಗಿದ್ದ ರಾಜಸ್ಥಾನ ಮೂಲಕ್ಕೆ ಹೋದ ಸಮಯದಲ್ಲಿ ಹಣದ ಬೇಡಿಕೆ ಇಟ್ಟಿದ್ದರಂತೆ. ಅದಕ್ಕಿಂತ ಪೂರ್ವದಲ್ಲಿಯೇ ಧಾರವಾಡದಲ್ಲಿ ಅವರಿಂದ ಹಣ ಪಡೆದಿದ್ದರಂತೆ. ಮತ್ತೆ ಹೋಗಿ ರಾಜಸ್ಥಾನದಲ್ಲಿಯೂ ಹಣದ ಬೇಡಿಕೆ ಇಟ್ಟಿದ್ದರಿಂದ ರಾಜಸ್ಥಾನದವರು ಇವರ ಮೇಲೆ ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ದೂರು ನೀಡಿದ್ದರಂತೆ.

ವಿದ್ಯಾಗಿರಿಗೆ ವರ್ಗಾವಣೆಗೊಂಡಿರುವ ಹೊನ್ನಪ್ಪನವರ ಈ ಹಿಂದೆ ಗಾಂಜಾ ಪ್ರಕರಣವೊಂದರಲ್ಲಿ ಅಮಾನತ್ತಾಗಿ, ನಂತರ ವರ್ಗಾವಣೆಗೊಂಡಿದ್ದನ್ನ ಸ್ಮರಿಸಬಹುದಾಗಿದೆ.

ವಿದ್ಯಾಗಿರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ಪ್ರಾಮಾಣಿಕರಾಗಿದ್ದು, ಇಂತಹದ್ದರ ಬಗ್ಗೆ ಅವರು ಕೂಡ ವಿಚಾರಿಸಬೇಕಿದೆ.


Spread the love

Leave a Reply

Your email address will not be published. Required fields are marked *