Posts Slider

Karnataka Voice

Latest Kannada News

​ಖಾಕಿ ಖದರ್ ಬಿಟ್ಟು ಮಗುವಾದ “ಧಾರವಾಡ ಎಸ್‌ಪಿ”- ಕುಂಬಾರಕೊಪ್ಪ ಶಾಲೆಯ ಸಂತೆಯಲ್ಲಿ ‘ಮಿರ್ಚಿ-ಮಂಡಕ್ಕಿ’ ಸವಿ..!

Spread the love

ಕುಂಬಾರಕೊಪ್ಪ ಶಾಲೆಯಲ್ಲಿ ಮಕ್ಕಳ ಸಂತೆ: ಮಿರ್ಚಿ-ಮಂಡಕ್ಕಿ ಸವಿದ ಎಸ್‌ಪಿ ಗುಂಜನ್ ಆರ್ಯ

ಅಳ್ನಾವರ: ತಾಲೂಕಿನ ಪಿ.ಎಂ. ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಬಾರಕೊಪ್ಪದಲ್ಲಿ ಏರ್ಪಡಿಸಿದ್ದ ‘ಮಕ್ಕಳ ಸಂತೆ’ ಗಮನ ಸೆಳೆಯಿತು. ಈ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಮಕ್ಕಳ ಉತ್ಸಾಹಕ್ಕೆ ಸಾಕ್ಷಿಯಾದರು.

​ಸಂತೆಯಲ್ಲಿ ಮಕ್ಕಳ ವ್ಯವಹಾರ ಜ್ಞಾನವನ್ನು ಮೆಚ್ಚಿದ ಎಸ್‌ಪಿ ಅವರು, ಸ್ವತಃ ಮಿರ್ಚಿ ಮಂಡಕ್ಕಿ ಖರೀದಿಸಿ ಸಿಬ್ಬಂದಿಯೊಂದಿಗೆ ಸವಿದರು. ಖಾಕಿ ದಿರಿಸಿನ ಉನ್ನತ ಅಧಿಕಾರಿಯೊಬ್ಬರು ಮಗುವಿನಂತೆ ಮಕ್ಕಳೊಂದಿಗೆ ಬೆರೆತದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

​ಈ ಸಂದರ್ಭದಲ್ಲಿ ಡಿಎಸ್ಪಿ ವಿನೋದ ಮುಕ್ತೆದಾರ, ಗರಗ ವೃತ್ತದ ಪೊಲೀಸ್ ಇನ್ಸಪೆಕ್ಟರ್ ಶಿವಯೋಗಿ ಲೋಹಾರ, ಶಾಲೆಯ ಮುಖ್ಯಗುರುಗಳು, ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮದ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed