Posts Slider

Karnataka Voice

Latest Kannada News

ಧಾರವಾಡ-71ರತ್ತ ‘ಇಸ್ಮಾಯಿಲ್ ತಮಾಟಗಾರ’ ಚಿತ್ತ: Whatsup Status ನಲ್ಲೇನಿದೆ ಗೊತ್ತಾ…!

1 min read
Spread the love

ಧಾರವಾಡ: ನಗರ ಮತ್ತು ಗ್ರಾಮೀಣ ಭಾಗದ ಕಾಂಗ್ರೆಸ್ ನಲ್ಲಿ ಹಲವು ರೀತಿಯ ಅಸಮಾಧಾನಗಳು ಕಂಡು ಬರುತ್ತಿದ್ದು, ಅದಕ್ಕೊಂದು ಬೇರೆಯದೇ ಸ್ವರೂಪ ಇಂದು ಕಾಂಗ್ರೆಸ್ ನಲ್ಲಿ ಕಂಡು ಬಂದಿದೆ.

ಕಾಂಗ್ರೆಸ್ ನ ಮುಖಂಡ ಇಸ್ಮಾಯಿಲ ತಮಾಟಗಾರ ಈಗಾಗಲೇ ಧಾರವಾಡ-74 ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಬೆಲ್ಲದ ಎದುರಿಗೆಎ ಸೋತಿದ್ದು, ಅವರೀಗ ತಮ್ಮ ಕ್ಷೇತ್ರವನ್ನ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆಂಬ ಸಂಶಯ ಬರುವಂತಹ ವಾಟ್ಸಾಫ್ ಸ್ಟೇಟಸ್ ನ್ನ ಹಾಕಿಕೊಂಡಿದ್ದಾರೆ.

ಅವರ ಪ್ರಕಾರ 2023ರ ಧಾರವಾಡ-71 ಅಭ್ಯರ್ಥಿಯಾಗಲು ತಾವು ಉತ್ಸುಕರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅವರು ಹಾಕಿರುವ ಭಾವಚಿತ್ರದಲ್ಲಿ ನಾನೂ ಫ್ರೀಯಾಗಿದ್ದೇನೆ ಮತ್ತು ಯಾರೊಂದಿಗೆ ರೇಸ್ ಗೆಎ ಬಿದ್ದಿಲ್ಲವೆಂದಿದ್ದಾರೆ.

ಈ ಮೂಲಕ ತಾವು ಧಾರವಾಡ-71 ಕ್ಷೇತ್ರಕ್ಕೆ ಬರುವ ಮುನ್ಸೂಚನೆ ನೀಡಿದ್ದು, ಅದು ಯಾವ ಪಕ್ಷದಿಂದ ಬರುತ್ತಾರೆ ಎಂಬುದೀಗ ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ಇಸ್ಮಾಯಿಲ ತಮಾಟಗಾರ ಉತ್ತರ ನೀಡಬೇಕಿದೆ.


Spread the love

Leave a Reply

Your email address will not be published. Required fields are marked *