“ಆಂಜನೇಯ” ಪ್ರಿಯ ರಾಹುಲನನ್ನ ಹತ್ಯೆಗೈದ “ಮಾರುತಿ” ಪಟಾಲಂ… ಧಾರವಾಡದ “ದೊಡ್ಡ ಸುದ್ದಿ”…

ಧಾರವಾಡ: ತನ್ನ ಮಡದಿಗೆ ಮೊಬೈಲ್ನಲ್ಲಿ ತೊಂದರೆ ಕೊಡುತ್ತಿದ್ದನೆಂಬ ಸಿಟ್ಟಿನಲ್ಲಿ ಹುಬ್ಬಳ್ಳಿಯಿಂದ ಕರೆಸಿಕೊಂಡು ಧಾರವಾಡದ ಕಾರಾಗೃಹದ ಸಮೀಪದಲ್ಲಿ ಹತ್ಯೆ ಮಾಡಿ, ಪೊಲೀಸ್ ಠಾಣೆಗೆ ಹೋದ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡದ ಸರಸ್ವತಪುರದ ಮಾರುತಿ ಎಂಬಾತನೇ ಮೊದಲ ಆರೋಪಿಯಾಗಿದ್ದು, ಈತನೊಂದಿಗೆ ಸಹಕರಿಸಿದ ನಾಲ್ಕೈದು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಆರೋಪಿ ಮಾರುತಿ ತನ್ನ ಪಟಾಲಂ ಜೊತೆ ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿದ್ದನ್ನ ಹೇಳಿದ ನಂತರ ಪೊಲೀಸರು ಹುಡುಕಾಟ ಆರಂಭಿಸಿ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಲು ಧಾರವಾಡದ ಸಂಪೂರ್ಣ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಹತ್ಯೆಯಾಗಿರುವ ರಾಹುಲ ಹುಬ್ಬಳ್ಳಿಯ ಆನಂದನಗರದ ನಿವಾಸಿಯಾಗಿದ್ದು, ಮಾರುತಿಯ ಮಡದಿಯ ಜೊತೆ ಮೊಬೈಲ್ ಮೂಲಕ ತೊಂದರೆ ಕೊಡುತ್ತಿದ್ದ ಎಂದು ಹೇಳಲಾಗಿದೆ.
ಧಾರವಾಡ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಿಖರವಾದ ಮಾಹಿತಿಯನ್ನ ಸಂಗ್ರಹಿಸಲು ಮುಂದಾಗಿದ್ದಾರೆ.