Posts Slider

Karnataka Voice

Latest Kannada News

ನಾನು ಪಕ್ಷೇತರ ಕ್ಯಾಂಡಿಟೇಟ್: ಘೋಷಣೆ ಮಾಡಿದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ…

1 min read
Spread the love

ಬೆಂಗಳೂರು: ತೀವ್ರ ಸ್ವರೂಪದ ಗೊಂದಲಕ್ಕೆ ಕಾರಣವಾದ ನಿರ್ಣಯವನ್ನ ಕೊನೆಗೂ ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ರಾಜಧಾನಿಯಲ್ಲಿ ಹೊರ ಹಾಕುವ ಮೂಲಕ ರಾಜ್ಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ.

ಲಿಂಗಾಯತ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶ್ರೀಗಳು, ರಾಷ್ಟ್ರೀಯ ಪಕ್ಷಗಳ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತೇನೆ ಎಂದು ನುಡಿದರು.

ಹಾಲಿ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಹಲವು ದಿನಗಳಿಂದಲೂ ಹರಿಹಾಯುತ್ತಿರುವ ಶ್ರೀಗಳು, ಚುನಾವಣೆಗೆ ಅಣಿಯಾಗುವ ಮೂಲಕ ಹೊಸ ಭಾಷ್ಯ ಬರೆಯಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಪ್ರತಿಷ್ಠಿತ ಮಠದ ಮಹಾಸ್ವಾಮಿಗಳು, ಚುನಾವಣೆ ಕಣದಲ್ಲಿ ಧುಮುಕುತ್ತಿರುವುದು ಹೊಸ ಬೆಳವಣಿಗೆಯಾಗಿದೆ.


Spread the love

Leave a Reply

Your email address will not be published. Required fields are marked *

You may have missed