Posts Slider

Karnataka Voice

Latest Kannada News

ಧಾರವಾಡ “ಡಿಡಿಪಿಐ ಕೆಳದಿಮಠ”ರಿಗೆ ಮತ್ತೊಂದು ಕಂಟಕ…!!!

1 min read
Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರಿಗೆ ಮತ್ತೊಂದು ಕಂಟಕ ಎದುರಾಗಿದ್ದು, ಅಸಲಿ-ನಕಲಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

ಹುಬ್ಬಳ್ಳಿ ತಾಲೂಕಿನ ಶಾಲೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಕಾನೂನನ್ನ ಗಾಳಿಗೆ ತೂರಿದ್ದರ ಬಗ್ಗೆ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಮಾಹಿತಿಯನ್ನ ಹೊರ ಹಾಕಿತ್ತು. ರಾಜ್ಯದ ಪ್ರಮುಖ ಪತ್ರಿಕೆಯೊಂದರ ಹೆಸರಿನಲ್ಲಿ ನಕಲಿ ಸೃಷ್ಟಿ ಮಾಡಲಾಗಿತ್ತು. ಇದನ್ನ ಕೂಡಾ ನಿಮ್ಮ ನೆಚ್ಚಿನ “ಕೆವಿ” ಹೊರ ಹಾಕಿತ್ತು. ಇದೀಗ ಈ ಬಗ್ಗೆ ರಾಜ್ಯದ ಪ್ರಮುಖ ಪತ್ರಿಕೆ ಸ್ಟಷ್ಟವಾಗಿ ಮಾಹಿತಿ ನೀಡಿದ್ದು, ಶಾಲೆಗೆ ಸಂಬಂಧಿಸಿದ ಯಾವುದೇ ಜಾಹೀರಾತು ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವೆಂದು ತಿಳಿಸಿದೆ.

ಪ್ರಮುಖ ಪತ್ರಿಕೆ ನೀಡಿರುವ ಮಾಹಿತಿ…

ಮಂಟೂರ ಶಾಲೆಯ ನೇಮಕಾತಿಯಲ್ಲಿ ನಡೆದ ನಕಲಿ ದಾಖಲೆಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಈ ಮೂಲಕ ಡಿಡಿಪಿಐ ವಿರುದ್ಧ ಎಫ್‌ಐಆರ್ ದಾಖಲಾದರೇ, ಡಿಡಿಪಿಐ ಹುದ್ದೆಗೂ ಸಂಚಕಾರ ಬರಬಹುದೆಂದು ಹೇಳಲಾಗುತ್ತಿದೆ.

ನಕಲಿ ಬಗ್ಗೆ ಕೆಲವು ದಿನಗಳ ಹಿಂದೆ ಡಿಡಿಪಿಐ ಕಚೇರಿ ಮುಂದೆ ಗ್ರಾಮಸ್ಥರು, ಹೋರಾಟ ನಡೆಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ವೀಡಿಯೋ

 


Spread the love

Leave a Reply

Your email address will not be published. Required fields are marked *