“For, Important, Teacher” ಪದಗಳನ್ನ ಹೇಳಿಕೊಟ್ಟ ಧಾರವಾಡ ಡಿಸಿ ದಿವ್ಯ ಪ್ರಭು… DDPI ಸಾಧನೆ ಬಹಿರಂಗ…!!!!
1 min readಧಾರವಾಡ: ಜಿಲ್ಲೆಯ ಶಾಲಾ ಶಿಕ್ಷಣ ಉಪನಿರ್ದೇಶಕರು ಮಾಡಬೇಕಾದ ಕಾರ್ಯವನ್ನ ಧಾರವಾಡದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಡುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಎಲ್ಲಿಗೆ ಬಂದು ನಿಂತಿದೆ ಎಂದು ಗೋಚರವಾಗುತ್ತಿದೆ.
ನಗರದ ಸರಕಾರಿ ಶಾಲೆಗೆ ಜಿಲ್ಲಾಧಿಕಾರಿಯವರು ಸಡನ್ನಾಗಿ ಭೇಟಿ ನೀಡಿದಾಗ, ಹಲವು ವೈಪರೀತ್ಯಗಳು ಕಂಡು ಬಂದವು.
ಇಲ್ಲಿದೆ ನೋಡಿ ವೀಡಿಯೋ… ಆಂಗ್ಲ ಭಾಷೆ ಓದಲು ತಡಬಡಿಕೆ…
ಮಿಷನ್ ವಿದ್ಯಾಕಾಶಿಯಡಿ ಎಲ್ಲರಿಗೂ ಉತ್ತಮ ಶಿಕ್ಷಣ ಕೊಟ್ಡು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊರಗೆ ಬರುವಂತೆ ನೋಡಿಕೊಳ್ಳಲು ಸ್ವತಃ ಡಿಸಿಯವರೇ ಮುಂದಾಗಿರುವುದು ಪಾಲಕರಲ್ಲಿ ಸಂತಸ ಮೂಡಿಸಿದೆ. ಏಕೆಂದರೆ, ಡಿಡಿಪಿಐ ಅವರ ಕಾರ್ಯವೈಖರಿ ಎಷ್ಟೊಂದು ಅಮೋಘವಾಗಿದೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ.