ವಾರದಿಂದ ಧಾರವಾಡ ಡಿಸಿಯವರು “ಟ್ಯೂನಿಂಗ್” ಮಾಡಿದ್ದಾರೆ: ಸಚಿವ ಕೃಷ್ಣ ಬೈರೇಗೌಡ…
1 min readಧಾರವಾಡ: ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು ಧಾರವಾಡ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಅಧಿಕಾರಿ ವರ್ಗದಲ್ಲಿ ಸಂಚಲನ ಮೂಡಿಸಿದ್ದಾರೆ.
ಭೇಟಿಯ ವೇಳೆಯಲ್ಲಿ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆಯುವ ಸಮಯದಲ್ಲಿ, ಜಿಲ್ಲಾಧಿಕಾರಿಗಳು ಒಂದು ವಾರದಿಂದ ಸಿಬ್ಬಂದಿಗಳನ್ನ ಟ್ಯೂನಿಂಗ್ ಮಾಡಿದ್ದಾರೆಂದು ಹೇಳಿ ನಸುನಕ್ಕರು.
ವೀಡಿಯೋ ಇಲ್ಲಿದೆ…
ಧಾರವಾಡ ಜಿಲ್ಲೆಯ ಇಲಾಖೆಯ ಕಚೇರಿಗಳ ಸೈಜ್ ಬಗ್ಗೆಯೂ ಮಾಹಿತಿ ಪಡೆದ ಸಚಿವ ಕೃಷ್ಣ ಬೈರೇಗೌಡರು, ಇಂದು ಸಂಜೆವರೆಗೂ ಹಲವು ಸಭೆಗಳನ್ನ ನಡೆಸಲಿದ್ದಾರೆ.