Posts Slider

Karnataka Voice

Latest Kannada News

“ಡೋಂಟ್ ವರಿ” ಅಂದ ಎರಡೇ ದಿನದಲ್ಲಿ “ಸ್ಥಳಾಂತರ”- ಮಾತು ತಪ್ಪದ ಧಾರವಾಡ ಜಿಲ್ಲಾಧಿಕಾರಿ “ದಿವ್ಯ ಪ್ರಭು”…!!!

1 min read
Spread the love

ಧಾರವಾಡ: ಸರಕಾರಿ ಪದವಿ ಕಾಲೇಜಿನ ಅವಸ್ಥೆಯನ್ನ ಕಂಡು ದಂಗಾಗಿದ್ದ ಧಾರವಾಡ ಜಿಲ್ಲಾಧಿಕಾರಿಯವರು ಸ್ವತಃ ತಾವೇ ಮುಂದೆ ನಿಂತು ಎರಡೇ ದಿನದಲ್ಲಿ ಕಾಲೇಜ್‌ನ್ನ ಬೇರೇಡೆ ಸ್ಥಳಾಂತರ ಮಾಡಿಸಿ, ವಿದ್ಯಾರ್ಥಿನಿಯರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಹೌದು… ಪದವಿ ಕಾಲೇಜಿನ ಅವಸ್ಥೆಯ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ಹೊರ ಹಾಕಿತ್ತು. ಅದಾದ ನಂತರ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಮಾತನ್ನ ನೀಡಿದ್ದರು.

ಪೂರ್ಣ ವೀಡಿಯೋ….

ಅತಿಯದ ಮಳೆ ಮತ್ತು ಹಳೆ ಕಟ್ಟಡವಾಗಿದ್ದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಸಮಸ್ಯೆ ಆಗಿದ್ದರಿಂದ, ಜಿಲ್ಲಾಧಿಕಾರಿಗಳು ಸ್ವತಃ ಇತರ ಕಟ್ಟಡಗಳನ್ನು ಪರಿಶೀಲಿಸಿ, ಯುಪಿಎಸ್ ಹೈಸ್ಕೂಲ ಮತ್ತು ಡೈಯಟ್ ಅವರಣದ ಕೊಠಡಿಗಳಿಗೆ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಕ್ಲಾಸಗಳನ್ನು ಸ್ಥಳಾಂತರಿಸಲು ಆದೇಶಿಸಿ, ಅವಕಾಶ ಮಾಡಿದ್ದಾರೆ.

ಇಂದು ಬೆಳಿಗ್ಗೆಯಿಂದ ಕಾಲೇಜಿನಲ್ಲಿ ಡೆಸ್ಕ್ ಹಾಗೂ ಇತರ ಭೋದನಾ ಅಗತ್ಯ ಉಪಕರಣಗಳ ಸಾಗಾಣಿಕೆ ಕಾರ್ಯ ನಡೆದಿದೆ.

 


Spread the love

Leave a Reply

Your email address will not be published. Required fields are marked *