ಧಾರವಾಡದಲ್ಲಿ “ಗೂಂಡಾಗಿರಿ”- ಜಿಲ್ಲಾಧಿಕಾರಿ ಕಚೇರಿ ಮುಂದೇನೆ… ಬಕ್ಕ್.. ಬಕ್ಕ್… ಬಕ್ಕ್…

ಧಾರವಾಡ: ವಿದ್ಯಾನಗರಿಯಲ್ಲಿ ದಿನೇ ದಿನೇ ವ್ಯವಸ್ಥೆ ಹದಗೆಡುತ್ತಿದೆ. ಕಳೆದ ವಾರ ಮಹಾನಗರ ಪಾಲಿಕೆ ಪಕ್ಕದಲ್ಲಿ ಗುತ್ತಿಗೆದಾರನ ಮೇಲೆ ಹಲ್ಲೆ ನಡೆದಿತ್ತು. ಇದೀಗ ಗೂಂಡಾಗಳು ಜಿಲ್ಲಾಧಿಕಾರಿ ಕಚೇರಿ ಮುಂದೇನೆ ಬಡಿದಾಡಿಕೊಂಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಯಾವುದೇ ಅಳುಕಿಲ್ಲದೇ ಹಿಗ್ಗಾಮುಗ್ಗಾ ಬಡಿದಾಡಿಕೊಂಡ ಗೂಂಡಾಗಳು, ಹಣದ ವಿಷಯವನ್ನ ಮಾತನಾಡುತ್ತಿದ್ದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನ ತೋರಿಸುತ್ತದೆ.