Posts Slider

Karnataka Voice

Latest Kannada News

ಧಾರವಾಡ: ಮಕ್ಕಳ ಉಳಿಸಿ ಪ್ರಾಣ ಕಳೆದುಕೊಂಡ ತಂದೆಯ ಕಣ್ಣು ದಾನ….!!!

1 min read
Spread the love

ಧಾರವಾಡ: ತೇಜಸ್ವಿನಗರದ ಬಳಿ ನಡೆದ ಬೈಕುಗಳ ಅಪಘಾತದಲ್ಲಿ ತಂದೆಯೋರ್ವ ಸಾವಿಗೀಡಾಗಿದ್ದು, ಅವರ ಜೊತೆಗಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇಗವಾಗಿ ಬಂದ ಬೈಕ್ ತಂದೆ-ಮಕ್ಕಲಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಲತಃ ಲಕ್ಷೇಶ್ವರದ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿ 35 ವರ್ಷದ ಚೆನ್ನಬಸಪ್ಪ ಶಿವಪ್ಪ ಹುಲ್ಲಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮಾರ್ಕೋಪೋಲೊ ಕಂಪನಿಯ ಉದ್ಯೋಗಿಯಾಗಿದ್ದ ಚೆನ್ನಬಸಪ್ಪನವರ ಎರಡು ಕಣ್ಣುಗಳನ್ನ ಕುಟುಂಬದವರು ಇಂತಹ ನೋವಿನ ಸಮಯದಲ್ಲಿಯೂ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಕ್ಕಳಾದ 7 ವರ್ಷದ ಅಥರ್ವ, 4 ವರ್ಷದ ಅಪೂರ್ವ ಅವರುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನಿಬ್ಬರು ಇದೇ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed