ತವನಪ್ಪ ಅಷ್ಟಗಿ, ಗುರುನಾಥಗೌಡ, ಶಂಕರ ಕೋಮಾರದೇಸಾಯಿಗೆ ಕೈಕೊಟ್ಟಿದ್ದು ಯಾರೂ….!?

ಧಾರವಾಡ: ಜಿಲ್ಲಾ ಪಂಚಾಯತಿ ಚುನಾವಣೆಗೆ ಮೀಸಲು ಕ್ಷೇತ್ರಗಳು ಬಹಿರಂಗವಾದ ನಂತರ ಹಲವು ಅನುಮಾನಗಳು ಆರಂಭವಾಗಿದ್ದು, ಜಿಲ್ಲಾ ಪಂಚಾಯತಿ ಆಕಾಂಕ್ಷಿಗಳಾಗಿದ್ದವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ.
ಉಪ್ಪಿನಬೆಟಗೇರಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಉತ್ಸುಕತೆಯನ್ನ ಹೊಂದಿದ್ದ ಹಿರಿಯ ನಾಯಕ ತವನಪ್ಪ ಅಷ್ಟಗಿಯವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಅವರು ಪ್ರತಿನಿಧಿಸಬೇಕಾದ ಉಪ್ಪಿನಬೇಟಗೇರಿ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಮೀಸಲು ಬಂದಿದೆ. ಹೀಗಾಗಿ ತವನಪ್ಪ ಅಷ್ಟಗಿಯವರು ಅಮ್ಮಿನಬಾವಿ ಕ್ಷೇತ್ರಕ್ಕೆ ಬರುತ್ತಾರೆಂದು ಹೇಳಲಾಗುತ್ತಿದೆಯಾದರೂ, ಮೂಲತಃ ಬಯಸಿದ್ದ ಉಪ್ಪಿನಬೇಟಗೇರಿ ಕ್ಷೇತ್ರ ಅವರು ನಿಲ್ಲದಂತಾಗಿದೆ.
ಈ ಬಗ್ಗೆ ತವನಪ್ಪ ಅಷ್ಟಗಿ ಹೇಳಿದ್ದೇನು..
ಒಮ್ಮೋಮ್ಮೆ ಹೀಗಾಗೋದು ಸಹಜ. ಈಗ ಬಂದಿರುವ ಮೀಸಲು ಬದಲಾವಣೆ ಮಾಡಿದರೇ ಬೇರೆಯವರಿಗೆ ಬೇಸರವಾಗಬಹುದು. ನಾನು ಅಮ್ಮಿನಬಾವಿ ಕ್ಷೇತ್ರದಿಂದ ನಿಲ್ಲುವ ಬಗ್ಗೆ ಯಾವುದು ಮಾತುಕತೆ ನಡೆದಿಲ್ಲ. ಪಕ್ಷದ ಮುಖಂಡರು ಹೇಳಿದ ಹಾಗೇ ಮುಂದಿನ ಹೆಜ್ಜೆ. ರಾಜಕೀಯದ ಮಾಡಿ ಮಾಡಿ ಸಾಕಾಗಿದೆ. ಇನ್ನೂ ಮುಂದೆ ರಾಜಕೀಯ ನಮ್ಮ ಹಿಂದೆ ಬರುವ ಹಾಗೇ ಮಾಡಿಕೊಳ್ಳುತ್ತೇನೆ.
ಇಂತಹದೇ ಸ್ಥಿತಿ ನರೇಂದ್ರ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ಆಗಿದೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತ ಬಂದಿದ್ದ ಶಂಕರ ಕೋಮಾರದೇಸಾಯಿ, ಈ ಸಲ ಜಿಲ್ಲಾ ಪಂಚಾಯತಿ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ, ಈ ಬಾರಿ ಹಿಂದುಳಿದ ವರ್ಗ (ಅ) ಮಹಿಳೆ ಬಂದಿರುವುದರಿಂದ ಹಿನ್ನೆಡೆಯಾಗಿದೆ.

ಈ ಬಗ್ಗೆ ಶಂಕರ ಕೋಮಾರದೇಸಾಯಿ ಹೇಳಿದ್ದೇನು..
ಬಹಳಷ್ಟು ನಂಬಿಕೆಯಿತ್ತು. ಮೀಸಲಾತಿ ಬಂದೇ ಬರುತ್ತದೆ ಎಂದು. ಆದರೆ, ಏನೂ ಮಾಡುವುದಕ್ಕೆ ಆಗುವುದಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಆಗಿದೆ. ಈಗಲೂ ಕ್ಷೇತ್ರದ ಮೀಸಲಾತಿ ಬದಲಾಗುವ ವಿಶ್ವಾಸ ತಮಗಿದೆ. ಆದರೆ, ಪಕ್ಷದ ನಿರ್ಧಾರವೇ ಅಂತಿಮ.
ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಗುರುನಾಥಗೌಡ ಗೌಡರ ಸಾಕಷ್ಟು ಆಕಾಂಕ್ಷೆಯನ್ನ ಹೊಂದಿದ್ದರು. ಆದರೆ, ಅಲ್ಲಿಯೂ ಕೂಡಾ ಸಾಮಾನ್ಯ ಮಹಿಳೆ ಬಂದಿರುವುದರಿಂದ ಗುರುನಾಥಗೌಡರಿಗೆ ಚುನಾವಣಾ ಅಖಾಡಾಕ್ಕೆ ಇಳಿಯುವ ಕನಸು ನನಸಾಗಿಲ್ಲ.

ಧಾರವಾಡ ಜಿಲ್ಲಾ ಪಂಚಾಯತಿ ಮೀಸಲಾತಿ ಹಲವರನ್ನ ಹಲವು ರೀತಿಯಲ್ಲಿ ನಿದ್ದೆಗೆಡಿಸಿದ್ದು, ಪಕ್ಷದಲ್ಲಿ ಆತಂರಿಕ ಗೊಂದಲವನ್ನ ಸೃಷ್ಟಿ ಮಾಡಿದೆ. ಇದಕ್ಕೆ ಯಾವ ಥರದಲ್ಲಿ ಸಮಾಧಾನವನ್ನ ಪಕ್ಷದ ಮುಖಂಡರು ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.