ಎಸಿಪಿ ಅನುಷಾ ಮೇಡಂ, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಡೆದದ್ದು ನಿಮಗೆ ಗೊತ್ತಾ….!!??
1 min readಧಾರವಾಡ: ನಗರದ ರಾಶಿ ಫಾರ್ಮ್ ಹೌಸ್ ಬಳಿ ಲಾರಿಯನ್ನೇ ಕದಿಯಲಾಗಿದೆ ಎಂದು ಕಟ್ಟು ಕಥೆ ಕಟ್ಟಿ, ಪೊಲೀಸರಿಗೂ ಸಿಕ್ಕರೂ ಸಿಗದಂತೆ ಮಾಡಿ, ಪೊಲೀಸರ ಗೌರವವನ್ನ ಲಕ್ಷ ಲಕ್ಷ ರೂಪಾಯಿಗೆ ಹರಾಜು ಹಾಕಿರುವುದು ಧಾರವಾಡದ ಎಸಿಪಿ ಅನುಷಾ ಅವರಿಗೆ ಗೊತ್ತಿಲ್ವಾ ಎಂಬ ಸಂಶಯ ಹಲವರಿಗೆ ಮೂಡಲಾರಂಭಿಸಿದೆ.
ಬಾಬುಸಾಹೇಬನ ಲಾರಿಯನ್ನ ತಾನೇ ಫೀಸ್ ಫೀಸ್ ಮಾಡಿದ್ದ ಮಲ್ಲಿಕಜಾನ ಹೊಳಿ, ಪೊಲೀಸರಿಗೆ ಸಿಕ್ಕರೂ ಆತನ ವಿರುದ್ಧ ಕ್ರಮ ಜರುಗಿಸದೇ ಇರುವುದಕ್ಕೆ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಸೇರಿ 3SB+1LPC ಮಾಡಿದ್ದೇನು ಎಂಬ ಸತ್ಯ ಎಸಿಪಿ ಅನುಷಾ ಅವರ ಕಣ್ಣೇದುರಿಗೆ ಬೀಳದೇ ಇರುವುದು ಅಚ್ಚರಿ ಸಂಗತಿಯಾಗಿದೆ.
ಹಳೇಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿನ ಸ್ಕ್ಯ್ರಾಫ್ ಅಂಗಡಿಯ ಮಂಜು ಎಂಬಾತನನ್ನ ಹಿಡಿದು, ಹಿಡಿಯದಂತೆ ನಡೆದುಕೊಂಡಿದ್ದು ಯಾರೂ. ದೂರುದಾರ ಬಾಬುಸಾಹೇಬನಿಗೆ ಕಮೀಷನರ್ ವರ್ಗಾವಣೆ ಆಗ್ಲಿ ತಡೀ ಎನ್ನುತ್ತಲೇ ಡೇಟ್ ಮುಂದೆ ಹಾಕಿದ್ದು ಏಕೆ ಎಂಬುದು ಎಸಿಪಿಯವರಿಗೆ ತಿಳಿಯದೇ ಹೋಗಿರುವುದು ಸೋಜಿಗ ಮೂಡಿಸುತ್ತಿದೆ.
ಧಾರವಾಡ ದಕ್ಷ ಎಸಿಪಿಯಾಗಿರುವ ಅನುಷಾ ಅವರಿಗೆ, ಧಾರವಾಡದ ಪ್ರತಿ ಪೊಲೀಸ್ ಠಾಣೆಯಲ್ಲಿ ನಡೆಯುವ ಎಲ್ಲವೂ ಗೊತ್ತಾಗತ್ತೆ ಎಂಬುದನ್ನ ಪೊಲೀಸ್ ಇಲಾಖೆಯ ಹಲವರು ಒಪ್ಪಿಕೊಳ್ಳುತ್ತಾರೆ. ಆದರೆ, ಈ ವಿಷಯ ಹೇಗೆ ಕಣ್ತಪ್ಪಿದೆ ಎಂಬುದನ್ನ ಮೇಡಂ ಅನುಷಾ ಅವರು ಪರಿಶೀಲನೆ ಮಾಡಬೇಕಿದೆ. ಜೊತೆಗೆ ಬೀದಿಗೆ ಬಿದ್ದಿರುವ ಬಾಬುಸಾಹೇಬನಿಗೆ ನಿಜ ನ್ಯಾಯ ಕೊಡಿಸಬೇಕಿದೆ.. ಅಲ್ವೇ…!?