Posts Slider

Karnataka Voice

Latest Kannada News

ಧಾರವಾಡ ಯೂನಿವರ್ಸಿಟಿಯಲ್ಲಿ ಸೆಕ್ಸ್.. ದೋಖಾ: ಕುಲಪತಿಗಳ ಪಿಎ ಮುಲ್ಲಾ, ಕೃವಿವಿಯ ಸಹಾಯಕ ಉಳವಪ್ಪ ಅಮಾನತ್ತು…!

Spread the love

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ನೌಕರರನ್ನ ಫುಸಲಾಯಿಸಿ ಗೋವಾಗೆ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿ, ಅಪಘಾತಪಡಿಸಿ ಕೊಲೆ ಮಾಡಲಾಗಿದೆ ಎಂದು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಕೃಷಿ ವಿಶ್ವವಿದ್ಯಾಲಯದ ಇಬ್ಬರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಕುಲಪತಿಯ ಆಪ್ತ ಸಹಾಯಕ ಮನಸೂರ ಮುಲ್ಲಾ ಹಾಗೂ ಕೃಷಿ ವಿಶ್ವವಿದ್ಯಾಲಯದ ಸ್ಟೇನೋಗ್ರಾಫರ್ ಉಳವಪ್ಪ ಮೇಸ್ತ್ರಿ ಮೇಲೆ ಐಪಿಸಿ 1860 (ಯು/ಎಸ್- 354(ಎ), 376, 302, 34) ಪ್ರಕರಣವನ್ನ ದಾಖಲು ಮಾಡಲಾಗಿತ್ತು.

ಧಾರವಾಡ ಶುಕ್ರವಾರ ಪೇಟೆ ಜೋಶಿ ಗಲ್ಲಿ ಮೇಘನಾ ಶೇತವಾಜಿ ಸಿಂಗನಾಥ ಹಾಗೂ ಧಾರವಾಡ ರೇಖಾ ಕೊಕಟನೂರ ಅವರನ್ನ ದುರ್ಬಳಕೆ ಮಾಡಿಕೊಂಡು ಕೊಲೆ ಮಾಡಲಾಗಿದೆ ಎಂದು ಪ್ರತಿಭಾ ಶಿವಾಜಿ ಗೊಂದಳಿ  ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡಿದ್ದ ಧಾರವಾಡ ಉಪನಗರ ಠಾಣೆ ಪೊಲೀಸರು, ತನಿಖೆಯನ್ನ ನಡೆಸಲು ಮುಂದಾಗಿದ್ದರು. ಸಾಕಷ್ಟು ಗೊಂದಲ ಮೂಡಿಸಿದ್ದ ಪ್ರಕರಣವೀಗ ಬೇರೆಯದ್ದೆ ಮಜಲನ್ನ ಪಡೆದಿದ್ದು, ಆಪಾದಿತರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.


Spread the love

Leave a Reply

Your email address will not be published. Required fields are marked *