Posts Slider

Karnataka Voice

Latest Kannada News

ಧಾರವಾಡದಲ್ಲಿ ಟವರ್ ಏರಿದ “ನಟೋರಿಯಸ್ ಗುಡಿ ಕಳ್ಳ ಜಾವ್ಯಾ”…

Spread the love

ಧಾರವಾಡ: ಕುಡಿದ ಮತ್ತಿನಲ್ಲಿದ್ದ ನಟೋರಿಯಸ್ ಕಳ್ಳನೋರ್ವ ನಗರದ ಜುಬ್ಲಿ ಸರ್ಕಲ್ ಬಳಿಯ ಟವರ್ ಏರಿ, ಆಷಾಢಭೂತಿತನ ತೋರಿಸಿದ ಘಟನೆ ನಡೆದಿದ್ದು, ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ಆತನನ್ನ ರಕ್ಷಣೆ ಮಾಡಲಾಗಿದೆ.

ಇಡೀ ಘಟನೆಯ ದೃಶ್ಯಾವಳಿ ಇಲ್ಲಿವೆ ನೋಡಿ… ಪೂರ್ಣ ವೀಡಿಯೋ ನೋಡಿ…

ಧಾರವಾಡದ ಜಾವೇದ್ ಡಲಾಯಿತ್ ಎಂಬಾತನೇ ಟವರ್ ಏರಿದ್ದ ಕಳ್ಳ. ಒಂದು ಕಾಲದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ಜೈಲು ಪಾಲಾಗಿದ್ದ. ನಂತರ ಕುಡಿತದ ಅಮಲಿಗೆ ಬಿದ್ದಿದ್ದ. ಲಕ್ಷ್ಮೀಸಿಂಗನಕೇರಿಯಲ್ಲಿನ ಮಡದಿ ಈತನನ್ನ ಬೆಳಗಾವಿಗೆ ಕರೆದುಕೊಂಡು ಹೋಗಿ ತರಕಾರಿ ವ್ಯಾಪಾರ ಮಾಡಲು ಹಚ್ಚಿದ್ದಳು. ಆದರೆ, ನಟೋರಿಯಸ್ ಜಾವೇದ್ ಕುಡಿತದ ಅಮಲಿಗೆ ಸಿಕ್ಕು ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಿದ್ದ.


Spread the love

Leave a Reply

Your email address will not be published. Required fields are marked *