Posts Slider

Karnataka Voice

Latest Kannada News

ಧಾರವಾಡದ ಸೈದಾಪುರದಲ್ಲಿ ತಲ್ವಾರೇಟು- ರಕ್ತಸಿಕ್ತವಾದ ಯಾಕೂಬ ಶಿವಳ್ಳಿ…!

1 min read
Spread the love

ಧಾರವಾಡ: ವಿನಾಕಾರಣ ಆರಂಭವಾದ ಜಗಳದಲ್ಲಿ ಚಿಕ್ಕಪ್ಪನಿಗೆ ಮಗನೇ ತಲ್ವಾರನಿಂದ ಹೊಡೆದು, ತೀವ್ರವಾಗಿ ಗಾಯಗೊಳಿಸಿದ ಘಟನೆ ಧಾರವಾಡದ ಸೈದಾಪುರ ಪ್ರದೇಶದ ಡುಮ್ಮಗೇರಿ ಓಣಿಯಲ್ಲಿ ನಡೆದಿದೆ.

ವಸೀಮ ಶಿವಳ್ಳಿ ಎಂಬಾತನೇ ತನ್ನ ಚಿಕ್ಕಪ್ಪ ಯಾಕೂಬ ಶಿವಳ್ಳಿಯನ್ನ ತಲ್ವಾರನಿಂದ ಹೊಡೆದಿದ್ದು, ತೀವ್ರವಾದ ರಕ್ತಸ್ರಾವವಾಗಿ, ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆಯಿಂದ ಡುಮ್ಮಗೇರಿ ಓಣಿಯಲ್ಲಿ ಆತಂಕದ ಛಾಯೆ ಮೂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಯಾಕೂಬ ಶಿವಳ್ಳಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಹಲ್ಲೆಗೊಳಗಾದ ಯಾಕೂಬ ಶಿವಳ್ಳಿಯವರ ಮನೆಗೆ ಹೋಗಿ ಉಪನಗರ ಠಾಣೆ ಇನ್ಸಪೆಕ್ಟರ್ ಶ್ಯಾಮರಾವ್ ಸಜ್ಜನ, ಮಾಹಿತಿಯನ್ನ ಕಲೆ ಹಾಕಿದ್ದು, ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಆಸ್ಪತ್ರೆಗೆ ಎಸಿಪಿ ಜೆ.ಅನುಷಾ ಅವರು ಭೇಟಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *