ಧಾರವಾಡ ಗಾಂಧಿನಗರದ ಇಬ್ಬರಿಂದ ಜೀವ ಬೆದರಿಕೆ…!

ಧಾರವಾಡ: ಕೆಲಸದ ಸಮಯದಲ್ಲಿ ನಂಭಿಕೆ ದ್ರೋಹ ಬಗೆದು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಧಾರವಾಡದ ಉಪನಗರ ಠಾಣೆಯಲ್ಲಿ ಅಶೋಕ ನಾಯಕ ಎಂಬುವವರು ದೂರು ದಾಖಲು ಮಾಡಿದ್ದಾರೆ.

ಧಾರವಾಡ ನಗರದ ಕಿತ್ತೂರು ಚೆನ್ನಮ್ಮ ಪಾರ್ಕ ಬಳಿಯಿರುವ ನಾಯಕ ಗ್ಯಾಸ್ ಗೋಡೌನಗೆ ಸಂಬಂಧಿಸಿದಂತೆ ಈ ವಿವಾದ ಸೃಷ್ಠಿಯಾಗಿದೆ. ಗಾಂಧಿನಗರದ ನಿವಾಸಿಗಳಾದ ಶಿವಕುಮಾರ ಕೆ.ಎಲ್ ಹಾಗೂ ಲೋಕೇಶ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಶಿವಕುಮಾರ ಕೆ.ಎಲ್ ಎಂಬುವವರು ಗ್ಯಾಸ್ ಗೋಡೌನದಲ್ಲಿ ಕೆಲಸಕ್ಕೆ ಸೇರಿಕೊಂಡು ನಂತರದ ವರ್ಷಗಳಲ್ಲಿ ಎಂಟು ಲಕ್ಷ ರೂಪಾಯಿ ಠೇವಣಿಯಿಟ್ಟು ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಎಲ್ಲ ವ್ಯವಹಾರ ಮಾಡುವ ಸಮಯದಲ್ಲಿ ತಮಗೆ ಮೋಸ ಮಾಡಿದ್ದಾರೆ. ಈಗ ಠೇವಣಿ ನೀಡುವಂತೆ ಇಬ್ಬರು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಅಶೋಕ ನಾಯಕ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಧಾರವಾಡ ಉಪನಗರ ಠಾಣೆ ಪೊಲೀಸರು ದೂರನ್ನ ಪಡೆದಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.