ಧಾರವಾಡ ಜೈಲಿನಲ್ಲಿ “ಟ್ಯೂಬ್ ಲೈಟ್ ತಿಂದು” ಆತ್ಮಹತ್ಯೆಗೆ ಯತ್ನಿಸಿದ ಖೈದಿಗಳು…

ಧಾರವಾಡ: ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಇಬ್ಬರು ಖೈದಿಗಳು ಜೈಲಿನ ಕೊಠಡಿಯಲ್ಲಿದ್ದ ಟ್ಯೂಬ್ ಲೈಟ್ ತಿಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಜೈಲಿನಲ್ಲಿ ಸಂಭವಿಸಿದೆ.

ಚಂದ್ರು ಹಾಗೂ ಪ್ರಮೋದ ಎಂಬ ಖೈದಿಗಳೇ ಇಂತಹ ಕೃತ್ಯಕ್ಕೆ ಇಳಿದಿದ್ದು, ಅವರನ್ನ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.
ಪ್ರತಿ ದಿನದಂತೆ ಊಟ ಮುಗಿಸಿದ ಕೆಲವೇ ಸಮಯದಲ್ಲಿ ಇಬ್ಬರೂ ಹೀಗೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದ್ದು, ನಿಖರವಾದ ಮಾಹಿತಿ ಇನ್ನೂ ತಿಳಿದು ಬರಬೇಕಿದೆ.