Posts Slider

Karnataka Voice

Latest Kannada News

ಧಾರವಾಡ: ‘ಮಗಳ’ನ್ನ ಪ್ರೀತಿಸುತ್ತಿದ್ದ ಯುವಕನ ಹೊಟ್ಟೆ ಹರಿದ ‘ತಂದೆ’…

1 min read
Spread the love

ಧಾರವಾಡ: ತನ್ನ ಮಗಳನ್ನ ಪ್ರೀತಿಸುತ್ತಿದ್ದ ಯುವಕನಿಗೆ ತಂದೆಯೋರ್ವ ಚಾಕು ಇರಿದ ಘಟನೆ ಧಾರವಾಡದ ಸೈದಾಪುರದಲ್ಲಿ ಈಗಷ್ಟೇ ನಡೆದಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಸೈದಾಪುರ ಗೌಡರ ಓಣಿಯ ಶಶಾಂಕ ಮೂಗನ್ನವರ ಎಂಬ ಯುವಕನಿಗೆ ಸುತಗಟ್ಟಿ ಚಾಳನ ಹುಲಗಪ್ಪ ಬಡಿಗೇರ ಎಂಬಾತ ಚಾಕುವಿನಿಂದ ಇರಿದಿದ್ದು, ಕರುಳು ಹೊರಬಂದಿವೆ.

ಕಳೆದ ಒಂದೂವರೆ ವರ್ಷದಿಂದ ಶಶಾಂಕ, ಹುಲಗಪ್ಪನ ಮಗಳನ್ನ ಪ್ರೀತಿಸುತ್ತಿದ್ದ. ಇದರಿಂದ ರೋಸಿ ಹೋಗಿ ಹೀಗೆ ಮಾಡಿದ್ದಾನೆಂದು ಹೇಳಲಾಗಿದೆ.

ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.

 


Spread the love

Leave a Reply

Your email address will not be published. Required fields are marked *