ಧಾರವಾಡದ ಯಾತ್ರಾರ್ಥಿ “ಉಮ್ರಾ” ವೇಳೆ ಹೃದಯಾಘಾತದಿಂದ ಸಾವು…

ಸೌದಿಯ ಮೆಕ್ಕಾಗೆ ಉಮ್ರಾ ಮಾಡಲು ಹೋಗಿದ್ದ ಧಾರವಾಡದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು
ಧಾರವಾಡ: ಸೌದಿಯ ಮೆಕ್ಕಾಗೆ ಉಮ್ರಾ ಮಾಡಲು ಹೋಗಿದ್ದ ಧಾರವಾಡದ ಯಾತ್ರಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ವರವ ನಾಗಲಾವಿ ಗ್ರಾಮದ ಸೈಯ್ಯದ ದಾದಾಪೀರ ಪೀರಜಾದೆ (70) ಎಂಬುವವರೆ ಇವತ್ತು ಮೇಕ್ಕಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು. ಇವರು ಕಳೆದ ಅಕ್ಟೋಬರ 9 ರಂದು ಧಾರವಾಡದಿಂದ ಮೇಕ್ಕಾಗೆ ಉಮ್ರಾ ಯಾತ್ರೆಗೆ ಹೋಗಿದ್ದರು. ಇವರ ಜೊತೆಯಲ್ಲಿ ಇವರ ಕುಟುಂಬದ ಕೆಲ ಸದಸ್ಯರು ಕೂಡಾ ಉಮ್ರಾಗೆ ಹೋಗಿದ್ದಾರೆ. ಸದ್ಯ ಪೀರಜಾದೆ ಅವರ ಅಂತ್ಯಕ್ರಿಯೆ ಮೇಕ್ಕಾದಲ್ಲೇ ಮಾಡುವ ನಿರ್ಧಾರವನ್ನ ಕುಟುಂಬದವರು ಮಾಡಿದ್ದಾರೆ.
ಸೈಯ್ಯದ ದಾದಾಪೀರ ಪೀರಜಾದೆ ಅವರು ವರವ ನಾಗಲಾವಿಯ ಶರೀಫ್ ಸಜ್ಜಾದ ದರ್ಗಾದ ಗುರುಗಳು ಕೂಡಾ ಆಗಿದ್ದರು.