Posts Slider

Karnataka Voice

Latest Kannada News

ಅಗರವಾಲ್ ಮೇಲೆ ಕುಲಕರ್ಣಿ, ‘PK’ ವಿರುದ್ಧ “SA” ದೂರು: FIR- ಬಂಧನ ಸಾಧ್ಯತೆ…

1 min read
Spread the love

ಧಾರವಾಡ: ನಗರದ ಟೈವಾಕ್ ಬಳಿ ನಡೆದ ಗಾಳಿಯಲ್ಲಿ ಗುಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು-ಪ್ರತಿ ದೂರು ದಾಖಲಾಗಿದ್ದು, ಇಬ್ಬರು ಬಂಧನವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆ ಬಾಂಬೆ ಮೂಲದ ಶುಶಾಂತ ಅಗರವಾಲ್ ಎಂಬ ಉದ್ಯಮಿ ತನ್ನ ಮಾಲಿಕತ್ವದ ಸ್ಥಳಕ್ಕೆ ಬಂದಾಗ, ಅಲ್ಲಿ ಪವನ ಕುಲಕರ್ಣಿಯವರು ರಿಯಲ್ ಎಸ್ಟೇಟ್ ನಡೆಸಲು ಪೂರಕವಾದ ಕಾಮಗಾರಿ ಆರಂಭಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಪವನ ಕುಲಕರ್ಣಿ ಅವರ ಜೊತೆಗಿದ್ದ ಕೆಲವರು ಮೇಲೆ ಬರುತ್ತಿದ್ದ ಹಾಗೇ, ಅಗರವಾಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪ್ರಕರಣದ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಇಬ್ಬರನ್ನೂ ಠಾಣೆಗೆ ತಂದು ವಿಚಾರಣೆ ನಡೆಸಿದರು. ಒಬ್ಬರ ಮೇಲೆ ಮತ್ತೋಬ್ಬರು ದೂರು ನೀಡಿದ್ದು, ಇಬ್ಬರ ಮೇಲೂ FIR ದಾಖಲಾಗುತ್ತಿದೆ. ಹೀಗಾಗಿ ಇಬ್ಬರದ್ದು ಬಂಧನ ಆಗಬಹುದೆಂದು ಹೇಳಲಾಗುತ್ತಿದೆ.

ಟೈವಾಕ ಹಿಂಬದಿಯ ಈ ಜಾಗ “ರೆಡ್‌ಝೋನ್”ದಲ್ಲಿದ್ದು ಅದನ್ನ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಭೂಮಿಯ ಸಂಬಂಧವಾಗಿ ಇನ್ಸಪೆಕ್ಟರೊಬ್ಬರ ಮೇಲೆಯೂ ಪ್ರಕರಣ ದಾಖಲಾಗಿದೆ.

ಶುಶಾಂತ ಅಗರವಾಲ್ ಕೂಡಾ ತನ್ನ ಭೂಮಿಯನ್ನ ಉಳಿಸಿಕೊಳ್ಳಲು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾನಂತೆ. ಪವನ ಕುಲಕರ್ಣಿ ಅವರು ಈ ಭೂಮಿಯ ವ್ಯವಹಾರದ ಹಲವು ಮಜಲುಗಳಲ್ಲಿ ಭಾಗಿಯಾದವರೆಂದು ಹೇಳಲಾಗಿದೆ.

ನಿಜವಾಗಿಯೂ ಈ ಆಸ್ತಿ ಯಾರದ್ದು…? ಆಸ್ತಿಯನ್ನ ‘ರೆಡ್‌ಝೋನ್’ದಲ್ಲಿ ಇದ್ದಾಗ ಅಭಿವೃದ್ಧಿ ಮಾಡಲು ಬರತ್ತಾ…? ಈ ಆಸ್ತಿಯನ್ನ ಕಬಳಿಸಲು ಯಾರ‌್ಯಾರು ಪ್ರಯತ್ನ ನಡೆಸಿದ್ದರು…? ಈ ಪ್ರಕರಣದ ಹಿಂದೆ ಯಾರಾದರೂ “ದೊಡ್ಡ”ವರು ಇದ್ದಾರಾ…? ಇಂಥಹ ಹಲವು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳಬೇಕಿದೆ.

 


Spread the love

Leave a Reply

Your email address will not be published. Required fields are marked *