ಧಾರವಾಡ: ಪತ್ರಕರ್ತ ‘ವಿಶ್ವನಾಥ ಕೋಟಿ’- ಪೋಟೊಗ್ರಾಫರ್ ‘ರಾಜಣ್ಣ’ನಿಗೆ ಸತ್ಕಾರ…!!!
1 min readಧಾರವಾಡ: ಪತ್ರಿಕಾ ದಿನದ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ವಿಶ್ವನಾಥ ಕೋಟಿ ಹಾಗೂ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ ಅವರನ್ನ ಸತ್ಕರಿಸಲಾಯಿತು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ನೇತೃತ್ವದಲ್ಲಿ ಸತ್ಕರಿಸಿ, ಪತ್ರಕರ್ತರು ನಾಡಿನ ಸಮಸ್ತ ಏಳಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಧಾರವಾಡದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕಾದ ಅವಶ್ಯಕತೆಯಿದ್ದು, ಪತ್ರಕರ್ತರು ಸರಕಾರದ ಗಮನ ಸೆಳೆಯಬೇಕೆಂದರು.
ಮೃದು ಸ್ವಭಾವದ ವಿಶ್ವನಾಥ ಕೋಟಿ ಹಾಗೂ ಆರ್ಕೆ ಎಂದೇ ಚಿರಪರಿಚಿತರಾಗಿರುವ ರಾಮಚಂದ್ರ ಕುಲಕರ್ಣಿ ಸತ್ಕಾರ ಸ್ವೀಕರಿಸಿ, ಸದಾಕಾಲ ಅವಳಿನಗರದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.
ಸ್ಥಾನಿಕ ಸಂಪಾದಕರಾದ ಮೋಹನ ಹೆಗಡೆ, ಮಾಜಿ ಸಂಸದ ಐ.ಜಿ.ಸನದಿ, ಶಂಕರ ಹಲಗತ್ತಿ, ತಿಗಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.