Posts Slider

Karnataka Voice

Latest Kannada News

ಒಬ್ಬ ಕದ್ದಾಂವಾ.. ಮಾರಿದವ್ರ್ ಇಬ್ರ್: ಮೂರ್ ಮಂದೀನ್ ಹೆಡಮುರಿಗೀ ಕಟ್ಯಾರ್ ಧಾರ್ವಾಡ ಪೊಲೀಸ್ರ್…!

Spread the love

ಧಾರವಾಡ: ನಗರದ ವಿವಿಧ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವ ಹಾಗೂ ಅವುಗಳನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಮಖಂಡಿ ತಾಲೂಕಿನ ಹೊಸೂರ ಗ್ರಾಮದ ಸಚಿನ ಮಲ್ಲಪ್ಪ ಗಿರಿಸಾಗರ ಹಾಲಿವಸ್ತಿ ಧಾರವಾಡದ ರಾಜೀವಗಾಂಧಿನಗರದ ನಿವಾಸಿ, ನವಲೂರ ಬಸವೇಶ್ವರನಗರದ ವಿಠ್ಠಲ ಮೈಲಾರಪ್ಪ ಶಿವಪ್ಪನವರ ಹಾಗೂ ನವಲೂರ ಜನತಾ ಪ್ಲಾಟ್ ನಿವಾಸಿ ಸುನೀಲ ಸುರೇಶ ಜಾಂಬೋಟಿ ಬಂಧಿತ ಆರೋಪಿಗಳಾಗಿದ್ದು, ಅವರಿಂದ 2.80 ಲಕ್ಷ ರೂಪಾಯಿ ಮೌಲ್ಯದ ಎಂಟು ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿ ನೇತೃತ್ವದಲ್ಲಿ ಪಿಎಸ್ಐ ಚಂದ್ರಶೇಖರ ಮದರಖಂಡಿ, ಪ್ರೋಬೇಷನರಿ ಪಿಎಸೈ ಸುನೀಲ ಎಚ್, ಸಿಬ್ಬಂದಿಗಳಾದ ಜಿ.ಜಿ.ಚಿಕ್ಕಮಠ, ಎನ್.ಎಚ್.ಗುಡಿಮನಿ, ಆರ್.ಆರ್.ಹೊಸಮನಿ, ಎಸ್.ಎಸ್.ತಿಪ್ಪಾಪುರ, ಕೆ.ಬಿ.ಬೀರನೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *