ಧಾರವಾಡದ MRನಗರದಲ್ಲಿ “ಓಮ್ನಿಯೊಳಗೆ ಸಿಲಿಂಡರ್ ಸ್ಪೋಟ”- ಓರ್ವನಿಗೆ ತೀವ್ರ ಗಾಯ… Exclusive Video
ಧಾರವಾಡ: ಓಮ್ನಿ ವಾಹನದಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ತಗುಲಿದ ಘಟನೆ ಧಾರವಾಡ ಹೆಬ್ಬಳ್ಳಿ ಅಗಸಿ ಹತ್ತಿರದ ಎಂಆರ್ನಗರದಲ್ಲಿ ಸಂಭವಿಸಿದ್ದು, ಓರ್ವನಿಗೆ ಗಾಯಗೊಂಡಿದ್ದಾರೆ.
ಓಮ್ನಿ ವಾಹನದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದರೆಂದು ಗೊತ್ತಾಗಿದ್ದು, ಇದನ್ನ ರಿಪೇರಿ ಮಾಡುವಾಗ ಆವಾಂತರ ನಡೆದಿದೆ. ಸ್ಥಳದಲ್ಲಿನ ವೀಡಿಯೋ ಇಲ್ಲಿದೆ ನೋಡಿ..
ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸದಿಂದ ಬೆಂಕಿಯನ್ನ ನಂದಿಸಿದ್ದು, ಓಮ್ನಿ ಸುಟ್ಟು ಹೋಗಿದೆ. ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
