Posts Slider

Karnataka Voice

Latest Kannada News

ಧಾರವಾಡ: ಓಸಿಯನ್ ಪರ್ಲ್‌ನಲ್ಲಿನ “ದಗಾಬಾಜಿ ಚೋರ್”ನ ಬಗ್ಗೆ ಇಂದು ಪೊಲೀಸ್ ಕಮೀಷನರ್‌ರಿಂದ ಮಹತ್ವದ ಮಾಹಿತಿ ಬಹಿರಂಗ…!!!

1 min read
Spread the love

ಧಾರವಾಡ: ನಗರದಿಂದ ಹುಬ್ಬಳ್ಳಿಗೆ ಹೋಗುವ ಸಮಯದಲ್ಲಿ ಎಡ ಭಾಗದಲ್ಲಿರುವ ದ್ ಓಸಿಯನ್ ಪರ್ಲ್ ಹೊಟೇಲ್‌ನಲ್ಲಿ ನಡೆದ ಭಾರೀ ಕಳ್ಳತನದ ಬಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರ ಮಾಹಿತಿಯನ್ನ ಬಹಿರಂಗ ಮಾಡಲಿದ್ದಾರೆ.

ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹೊಟೇಲ್‌ನಲ್ಲಿ ಮೂರು ವಾರಗಳ ಹಿಂದೆ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಂಗಾದರಪ್ಪ ಪಟ್ಟಣಶೆಟ್ಟಿ ಅವರ ಪುತ್ರ ಡಾ.ಶರಣಪ್ಪ ಅವರ ಜೊತೆ ಡಾ.ಪೂಜಾ ಅವರ ಮದುವೆ ನಡೆದಿತ್ತು. ಅದೇ ಸಮಯದಲ್ಲಿ ಲಕ್ಷಾಂತರ ರೂಪಾಯಿ, ಚಿನ್ನ, ವಜ್ರವನ್ನ ದೋಚಿಕೊಂಡು ಪರಾರಿಯಾಗಿದ್ದ.

ಪೈಲ್ ಪೋಟೊ

ಆರೋಪಿಯ ಜಾಡು ಹಿಡಿದು ಮದ್ಯಪ್ರದೇಶಕ್ಕೆ ತೆರಳಿದ್ದ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಟೀಂ, ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದ್ದು, ಇದೇ ವಿಚಾರವನ್ನ ಕಮೀಷನರ್ ಅಧಿಕೃತವಾಗಿ ಹೇಳಲಿದ್ದಾರೆಂದು ಗೊತ್ತಾಗಿದೆ.

ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ಈ ಪ್ರಕರಣದಲ್ಲಿ ಮಹತ್ವದ ಸುಳಿವಿನ ಜೊತೆ ಕಾರ್ಯಾಚರಣೆ ನಡೆಸಿದ್ದರು.

 


Spread the love

Leave a Reply

Your email address will not be published. Required fields are marked *