Posts Slider

Karnataka Voice

Latest Kannada News

ಧಾರವಾಡದ “ನ್ಯೂ ರಾಯಲ್ ಕಿಚನ್”ಗೆ ಭೇಟಿ ನೀಡಿದ ಸಚಿವ ಜಮೀರ್‌ಅಹ್ಮದ- ಇಸ್ಮಾಯಿಲ್ ತಮಾಟಗಾರ ಸಾಥ್…!!!

1 min read
Spread the love

ಧಾರವಾಡ: ನಗರದ ಎನ್‌ಟಿಟಿಎಫ್ ಬಳಿಯಿರುವ ಜನಪ್ರಿಯವಾಗಿರುವ ನ್ಯೂ ರಾಯಲ್ ಕಿಚನ್‌ಗೆ ಸಚಿವ ಜಮೀರ್ ಅಹ್ಮದ ಅವರು ಭೇಟಿ ನೀಡಿದ್ದಲ್ಲದೇ, ಹೊಟೇಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರು ಸಚಿವರನ್ನ ಹೊಟೇಲ್‌ಗೆ ಕರೆದುಕೊಂಡು ಬಂದು ಮಾಲೀಕರ ಸಾಮಾಜಿಕ ಕಳಕಳಿಯ ಕುರಿತು ಸಚಿವರಿಗೆ ವಿವರಿಸಿದರು.

ವೀಡಿಯೋ…

ಹೊಟೇಲ್ ಮಾಲೀಕರುಗಳಾದ ಅಜೀಂ ನಾಯ್ಕ ಹಾಗೂ ಅಲೀಂ ನಾಯ್ಕ್ ಅವರುಗಳು ಸಚಿವರಿಗೆ ಸತ್ಕರಿಸಿದರಲ್ಲದೇ, ಸಮಾಜದ ಮುಖಂಡರಾಗಿರುವ ಇಸ್ಮಾಯಿಲ್ ತಮಾಟಗಾರ ಅವರಿಗೆ ಉತ್ತಮ ಭವಿಷ್ಯವಿದ್ದು, ಅವರಿಗೆ ತಮ್ಮ ಸಹಕಾರ ಇರಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ನ್ಯೂ ರಾಯಲ್ ಕಿಚನ್ ಕುರಿತು ಮಾಹಿತಿ ಪಡೆದ ಸಚಿವರು, ಹಲವು ಖಾಧ್ಯಗಳನ್ನ ಸೇವಿಸಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *