Posts Slider

Karnataka Voice

Latest Kannada News

ಧಾರವಾಡದ ಮೈಸೂರು ಗ್ಯಾರೇಜಿಗೆ ಬೆಂಕಿ- ಲಕ್ಷಾಂತರ ರೂಪಾಯಿ ಪರಿಕರಗಳು ಭಸ್ಮ…!

Spread the love

ಧಾರವಾಡ: ನಗರದ ದೇಶಪಾಂಡೆಚಾಳ ಬಳಿಯಿರುವ ಮಾರುತಿ ಸುಜುಕಿಯ ಮೈಸೂರು ಗ್ಯಾರೇಜ್ ಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕಾರಿನ ಪರಿಕರಗಳು ಸುಟ್ಟು ಕರಕಲಾಗಿವೆ.

ವಿದ್ಯುತ್ ಅವಘಡದಿಂದ ಬೆಂಕಿ ತಗುಲಿದ್ದು, ಕಚೇರಿಯೂ ಸೇರಿದಂತೆ ಕಾರಿನ ವಸ್ತುಗಳನ್ನಿಡುತ್ತಿದ್ದ ಜಾಗವೂ ಬೆಂಕಿಗೆ ಸುಟ್ಟು ಹೋಗಿದೆ. ಸುಟ್ಟು ಹೋಗಿರುವ ವಸ್ತುಗಳ ಬಗ್ಗೆ ನಿಖರವಾದ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.

ಬೆಂಕಿ ತಗುಲಿದ ಸುದ್ದಿ ತಿಳಿದ ಹಾಗೇ ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದ ಸಿಬ್ಬಂದಿಯೂ ಕೆಲಕಾಲ, ನಂದಿಸಲು ಹರಸಾಹಸ ಪಡಬೇಕಾಯಿತು. ಸುಮಾರು ಹೊತ್ತಿನ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಧಾರವಾಡದ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ವಿವರವನ್ನ ಸಂಗ್ರಹಿಸಲಾಗುತ್ತಿದೆ.


Spread the love

Leave a Reply

Your email address will not be published. Required fields are marked *