ಧಾರವಾಡದಲ್ಲಿ ಯುವಕನ ಬರ್ಭರ ಹತ್ಯೆ…!

ಧಾರವಾಡ: ನಗರದ ಮುರುಘಾಮಠದ ಬಳಿಯಿರುವ ಡಿಪೋದ ಹತ್ತಿರ ಯುವಕನನ್ನ ಧಾರುಣವಾಗಿ ಕೊಲೆ ಮಾಡಿರುವ ಘಟನೆ ಕೆಲವೇ ಸಮಯದ ಹಿಂದೆ ನಡೆದಿದ್ದು, ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಕೊಲೆಯಾದ ಯುವಕನನ್ನ ಆಕಾಶ ಕೋಟೂರ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಪದೇ ಪದೇ ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಹೇಳಲಾಗಿದೆ.
ಸುಖಾಸುಮ್ಮನೆ ಕುಡಿದು ಬಂದು ಇಂದು ಕೂಡಾ ದಾಂಧಲೆ ಆರಂಭಿಸಿದ ಹಿನ್ನೆಲೆಯಲ್ಲಿ ಹರಿತವಾದ ಆಯುಧದಿಂದ ಆಕಾಶ ಕೋಟೂರನನ್ನ ಆತನ ಚಿಕ್ಕಪ್ಪ ಪ್ರಕಾಶ ಕೋಟೂರ ಎಂಬಾತನೇ ಹೊಡೆದು ಕೊಲೆ ಮಾಡಿದ್ದಾನೆ. ಮನೆಯಲ್ಲಿಯೇ ಘಟನೆ ನಡೆದಿದ್ದರಿಂದ ಮನೆಯಲ್ಲಾ ರಕ್ತಸಿಕ್ತವಾಗಿದೆ.
ಧಾರವಾಡದ ಡಿಪೋ ಬಳಿಯ ಮನೆಯಲ್ಲಿ ಆಕಾಶ ಕೋಟೂರ ಎಂಬ 30 ವರ್ಷದ ಯುವಕನ ಕೊಲೆಯಾದ ಸುದ್ದಿ ಹೊರ ಬಂದ ತಕ್ಷಣವೇ ಧಾರವಾಡ ಉಪನಗರ ಠಾಣೆಯ ಪೊಲೀಸರು, ಸ್ಥಳಕ್ಕೆ ಆಗಮಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಆಕಾಶ ಕೋಟೂರ ತನ್ನದೇ ಟ್ಯಾಟುವನ್ನ ಎದೆಯ ಮೇಲೆ ಹಾಕಿಸಿಕೊಂಡು, ಎಲ್ಲರಿಗೂ ತೋರಿಸಿಕೊಳ್ಳುತ್ತಿದ್ದ. ತನ್ನ ಮೇಲೆ ಅತಿಯಾದ ಅಭಿಮಾನ ಹೊಂದಿದ್ದ ಯುವಕ, ಮನೆಯಲ್ಲಿ ಮಾತ್ರ ಗಲಾಟೆಗೆ ಕಾರಣವಾಗುತ್ತಿದ್ದ ಎಂದು ಹೇಳಲಾಗಿದೆ.
ಹತ್ಯೆಯಾದ ಯುವಕನ ತಂದೆ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ಕೂಡು ಕುಟುಂಬದಲ್ಲಿದ್ದ ಆಕಾಶನ, ಕಿರಿಕಿರಿಯಿಂದ ಕೊಲೆ ನಡೆದಿರುವುದಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.