Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ “ನಮ್ಮ ಹೊಲ ನಮ್ಮ ದಾರಿ”ಯ ‘ರೂವಾರಿ’ ಶಾಸಕ ವಿನಯ ಕುಲಕರ್ಣಿಯವರಿಂದ “ಸಿಎಂ” ಭೇಟಿ…

1 min read
Spread the love

ಬೆಂಗಳೂರು: ಧಾರವಾಡ ಗ್ರಾಮೀಣ ಭಾಗದಲ್ಲಿ ನಮ್ಮ ಹೊಲ ನಮ್ಮ ರಸ್ತೆಯಿಂದ ರೈತರಿಗೆ ಆಗಿರುವ ಉಪಯೋಗದ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಶಾಸಕ ವಿನಯ ಕುಲಕರ್ಣಿ ಅವರು ವಿವರಣೆ ನೀಡದರು.

ಕ್ಷೇತ್ರದಲ್ಲಿ ರಸ್ತೆ ಮಾಡಿದ್ದರ ಪರಿಣಾಮ ರೈತ ಸಮೂಹಕ್ಕೆ ಸಾಕಷ್ಟು ಅನುಕೂಲವಾಗಿದ್ದು, ಬೆಳೆದ ಬೆಳೆಯನ್ನ ತರಲು ಉಪಯೋಗವಾಗಿರುವ ಕುರಿತು ಛಾಯಾಚಿತ್ರಗಳನ್ನ ಸಿಎಂ ಅವರಿಗೆ ತೋರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು…

ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ Siddaramaiah ಅವರನ್ನು ಭೇಟಿಮಾಡಿ ಉಭಯ ಕುಶಲೋಪರಿ ವಿಚಾರಿಸಿದೆ, ನಮ್ಮ ಧಾರವಾಡ ಗ್ರಾಮೀಣ ಭಾಗದಲ್ಲಿ ನಡೆದ ಅಭಿವೃದ್ಧಿ ಕೆಲಸ #ನಮ್ಮ_ಹೊಲ_ರಸ್ತೆ ಕಾರ್ಯದ ಬಗ್ಗೆ ವಿವರಣೆ ನೀಡಿ, ಕಾರ್ಯದ ಚಾಯಾಚಿತ್ರಣ ನೀಡಿದೆನು.

ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು ಹಾಗು ಈ ತರಹದ ಅಭಿವೃದ್ಧಿ ಕಾರ್ಯಕ್ಕೆ ಇನ್ನು ಹೆಚ್ಚಿನ ಅನುಧಾನ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ N H Konaraddi ನಮ್ಮ ಧಾರವಾಡ ಗ್ರಾಮೀಣ ಭಾಗದ ಮುಖಂಡರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *