Posts Slider

Karnataka Voice

Latest Kannada News

ಧಾರವಾಡ: KMF ಚುನಾವಣೆಯಲ್ಲಿ “ಕಾಂಗ್ರೆಸ್‌” ಬೆಂಬಲಿತರಿಗೆ ಹೀನಾಯ ಸೋಲು- ಶಂಕರ ಮುಗದ ದಾಖಲೆ ಗೆಲುವು…!!!

1 min read
Spread the love

ಧಾರವಾಡ: ಹಾಲು ಉತ್ಪಾದಕರ ನಿರ್ದೇಶಕರ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಜಯಗಳಿಸಿದ್ದು, ಕಾಂಗ್ರೆಸ್ ಬೆಂಬಲಿತರು ಹೀನಾಯ ಸೋಲು ಅನುಭವಿಸಿದ್ದಾರೆ.

ಹಾಲಿ ಅಧ್ಯಕ್ಷ ಶಂಕರ ಮುಗದ ಅವರು ದಾಖಲೆಯ ಜಯಗಳಿಸಿದ್ದು, 82 ಮತಗಳ ಪೈಕಿ 78 ಮತಗಳನ್ನ ಗಳಿಸಿದ್ದು, ಎದುರಾಳಿ ಹೇಮರೆಡ್ಡಿ ಲಿಂಗರೆಡ್ಡಿ ಕೇವಲ ನಾಲ್ಕು ಮತಗಳನ್ನ ಪಡೆದಿದ್ದಾರೆ.

ಚುನಾವಣೆಯ ಮತ ಎಣಿಕೆ ಘೋಷಣೆ ಆಗುತ್ತಿದ್ದ ಹಾಗೇ ಶಂಕರ ಮುಗದ ಅವರನ್ನ ಬೆಂಬಲಿಗರು ಮೇಲೆತ್ತಿ ಘೋಷಣೆ ಕೂಗಿದರು. ಶಿವಳ್ಳಿ ಗ್ರಾಮದ ಹಲವರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಐದನೇ ಬಾರಿಗೆ ಧಾರವಾಡ‌, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೆಶಕರಾಗಿ ಶಂಕರ ಮುಗದ ಆಯ್ಕೆಯಾಗಿದ್ದಾರೆ.

 


Spread the love

Leave a Reply

Your email address will not be published. Required fields are marked *