Posts Slider

Karnataka Voice

Latest Kannada News

ಧಾರವಾಡ: ಆಜಾದ್ ಪಾರ್ಕ್ ಬಳಿ ಉರುಳಿದ ಬೃಹತ್ ಮರ- ಹಲವು ವಾಹನಗಳು ಜಖಂ…

Spread the love

ಧಾರವಾಡ: ನಗರದ ಹಳೇ ಬಸ್ ನಿಲ್ದಾಣದ ಬಳಿಯಿರುವ ಆಜಾದ್ ಪಾರ್ಕ್ ಹತ್ತಿರದ ಬೃಹತ್ ಮರವೊಂದು ನೆಲಕ್ಕುರುಳಿದ್ದು, ಹಲವು ವಾಹನಗಳು ಜಖಂಗೊಂಡಿವೆ.

ಕೆಲವೇ ಸಮಯದ ಹಿಂದೆ ಘಟನೆ ನಡೆದಿದ್ದು, ಕಾರು ಸೇರಿದಂತೆ ಹಲವು ಬೈಕುಗಳು ಜಖಂಗೊಂಡಿವೆ. ಕೆಲವರು ದಾರಿ ಹೋಕರು ಅಲ್ಲಿಂದ ಕಾಲ್ಕಿತ್ತು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.

ಮರ ರಸ್ತೆಯುದ್ದಕ್ಕೂ ಬಿದ್ದ ಪರಿಣಾಮ, ಸಂಚಾರಕ್ಕೆ ಅಡಚಣೆಯಾಗಿದೆ. ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ನಿಭಾಯಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *