Posts Slider

Karnataka Voice

Latest Kannada News

ಧಾರವಾಡ: ಕದ್ದದ್ದು 12448087 ರೂ.- ಸಿಕ್ಕಿದ್ದು 7989870 ರೂ: ಮಿಕ್ಕಿದ್ದಕ್ಕಾಗಿ “ಪ್ಲಾನ್-2″…

1 min read
Spread the love

ಧಾರವಾಡ: ತೀವ್ರ ಸ್ವರೂಪದ ಕಳ್ಳತನ ಮಾಡಿ ಪರಾರಿಯಾಗಿದ್ದ ತಂಡದ ಪ್ರಮುಖ ಹತ್ತು ಜನ ಆರೋಪಿಗಳ ತಂಡವನ್ನ ಹೆಡಮುರಿಗೆ ಕಟ್ಟುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡ ಯಶಸ್ವಿಯಾಗಿದೆ.

ಈ ಬಗ್ಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮಾಹಿತಿ ನೀಡಿ, ಸಿಸಿಟಿವಿಗಳು ಇಲ್ಲದಿರುವದರ ಕುರಿತು ಹೇಳಿದರು.

ಕಮೀಷನರ್ ರೇಣುಕಾ ಸುಕುಮಾರ ಅವರ ಹೇಳಿಕೆ…

ಹತ್ತು ಆರೋಪಿಗಳ ಪೈಕಿ ಮೂವರು ಸಂಸ್ಥೆಯ ಸಿಬ್ಬಂದಿಗಳಾಗಿದ್ದು, ಹತ್ತು ಜನರ ಪೈಕಿ ನಾಲ್ವರು ಈ ಹಿಂದೆಯೂ ಬೇರೆ ಪ್ರಕರಣದಲ್ಲಿ ಭಾಗಿಯಾಗಿರುವವರಿದ್ದಾರೆ.

ಆರೋಪಿಗಳ ಸಂಪೂರ್ಣ ವಿವರ.. ಎಕ್ಸಕ್ಲೂಸಿವ್ ವೀಡಿಯೋ…

ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರ ಜೊತೆಗೆ ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ, ಪಿಎಸ್ಐಗಳಾದ ಬಾಬಾ, ಎಚ್.ಜಿ.ಪ್ರಮೋದ, ಎಂ.ಆರ್.ಮಲ್ಲಿಗವಾಡ, ಎಎಸ್ಐ ಐ.ಐ.ಮದರಖಂಡಿ, ಈರಣ್ಣ ಬುರ್ಜಿ, ಗಿರೀಶ ಚಿಕ್ಕಮಠ, ನಾಗರಾಜ ಗುಡಿಮನಿ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ್, ವೈ.ಎಂ.ಮಹಾಂತೇಶ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಗಿರೀಶ ಬಿದರಳ್ಳಿ, ವಿ.ಎಚ್.ಚವರೆಡ್ಡಿ, ಬಸವರಾಜ ಸವಣೂರು, ವಿ.ಎಸ್.ಕುದರಿ, ರಮೇಶ ಕೋತಂಬ್ರಿ, ಎಂ.ಎಚ್.ಉಷಾ, ಕಮೀಷನರ್ ಕಚೇರಿಯ ಟೆಕ್ನಿಕಲ್ ಸೆಲ್ ವಿಭಾಗದ ಎಂ.ಎಸ್.ಚಿಕ್ಕಮಠ, ಆರ್.ಕೆ.ಬಡಂಗಕರ, ಆರ್.ಎಸ್.ಗೋಮಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *