ಧಾರವಾಡ ಜನತಾ ದರ್ಶನ: ಜಿಲ್ಲಾಡಳಿತ ಮಾಡಿದ ಅವ್ಯವಸ್ಥೆ…

ಧಾರವಾಡ: ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ಸಮಯದಲ್ಲಿ ನಡೆಯುತ್ತಿರುವ ಜನತಾ ದರ್ಶನ ಧಾರವಾಡದಲ್ಲಿ ಅವ್ಯವಸ್ಥೆಯಿಂದ ಕೂಡಿದ್ದು, ಜನರು ಸಂಕಷ್ಟಗಳನ್ನ ತಿಳಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಮಾತ್ರ ಪ್ರತಿಯೊಬ್ಬರ ಸಮಸ್ಯೆಯನ್ನ ಆಸಕ್ತಿಯಿಂದ ಕೇಳಿ, ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದಾರೆ.
ಧಾರವಾಡ ಜಿಲ್ಲಾಡಳಿತ ಜನತಾ ದರ್ಶನದ ಬಗ್ಗೆ ನಿಖರವಾದ ಕಲ್ಪನೆ ಇಲ್ಲದ ಹಾಗೇ ವ್ಯವಸ್ಥೆ ಮಾಡಿರುವುದು ಕಂಡು ಬಂದಿತು. ಯಾರು, ಯಾವ ಕಾರಣಕ್ಕೆ ಬಂದಿದ್ದಾರೆಂದು ಕೇಳುವ ವ್ಯವದಾನ ಸಚಿವರಿಗೆ ಇತ್ತಾದರೂ, ವ್ಯವಸ್ಥೆ ಮಾತ್ರ ಯಾವುದು ಸರಿಯಾಗಿರಲಿಲ್ಲ.
ಜನರ ಕೋರಿಕೆಯನ್ನ ಈಡೇರಿಸುವ ಬಯಕೆ ಸರಕಾರಕ್ಕೀದರೂ, ಅದರ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡುವುದರಲ್ಲಿ ಸಂಪೂರ್ಣವಾಗಿ ಎಡುವಿದೆ.