ಧಾರವಾಡ ತೋಟಗಾರಿಕೆ ಆಡಳಿತ ಮಂಡಳಿ ಚುನಾವಣೆ: ಒಂದೂ ಸ್ಥಾನ ಗೆಲ್ಲದ ಬಿಜೆಪಿ…!!!

ಧಾರವಾಡ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಸಂಸ್ಕರಣ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ 2024ರ ಚುನಾವಣೆ ನಡೆದ ದಿನಾಂಕದಿಂದ ಮುಂದಿನ 05 ವರ್ಷಗಳ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ.
12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಒಂದೇ ಒಂದು ಸ್ಥಾನ ಗೆದ್ದಿಲ್ಲ.
ನರೇಂದ್ರ ಗ್ರಾಮದ ಮಲ್ಲಪ್ಪ ಮೊರಬ ಅವರ ಪುತ್ರ ಬಸವರಾಜ ಅವರು ಹೆಬ್ಬಳ್ಳಿಯ ಬಸವರಾಜ ತಂಬಾಕದ ಅವರನ್ನ ಸೋಲಿಸಿದ್ದಾರೆ.