ಧಾರವಾಡ-ಗೋವನಕೊಪ್ಪ ರಸ್ತೆಯಲ್ಲಿ ಬೈಕ್ ಸವಾರನಿಗೆ ಖಾರದ ಪುಡಿ ಎರಚಿ ಲಕ್ಷ, ಲಕ್ಷ ದರೋಡೆ….!!!

ಧಾರವಾಡ: ಗ್ಯಾರೇಜ್ನಲ್ಲಿ ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದ ಮೆಕಾನಿಕ್ನಿಗೆ ಖಾರದಪುಡಿ ಎರಚಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಧಾರವಾಡ- ಗೋವನಕೊಪ್ಪ ರಸ್ತೆಯಲ್ಲಿ ಸಂಭವಿಸಿದೆ.
ಧಾರವಾಡದ ಶಿವಾಜಿ ವೃತ್ತದ ಬಳಿ ಗ್ಯಾರೇಜ್ ನಡೆಸುತ್ತಿದ್ದ ಆದಿಲ್ ಮಸ್ತಾನವಾಲೆ ಎಂಬಾತನನ್ನೇ ದರೋಡೆ ಮಾಡಲಾಗಿದೆ.
ವೀಡಿಯೋ…
ಎರಡ್ಮೂರು ಜನರಿದ್ದ ತಂಡವೂ ಕೃತ್ಯವೆಸಗಿದೆ. ಆದಿಲ್ ಬ್ಯಾಂಕಿನಲ್ಲಿ ಬಂದಿದ್ದ ಲೋನ್ ಹಣವನ್ನ ತೆಗೆದುಕೊಂಡು ಮನೆಗೆ ಹೋಗುವಾಗ ದರೋಡೆ ಸಂಭವಿಸಿದೆ.
ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.