ಧಾರವಾಡದ ಮುರುಘಾಮಠದ ಸುತ್ತಮುತ್ತ ‘ಅಂದರ್-ಬಾಹರ್’- ಯಾರಾತ ಸೋಮು….!?

ಧಾರವಾಡ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ನಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಮಯದಲ್ಲಿಯೇ, ಕೆಲವು ‘161’ ಪೊಲೀಸರಿಂದ ಮರುಘಾಮಠದ ಸುತ್ತಮುತ್ತ ಅಂದರ್-ಬಾಹರ್ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಈ ಪ್ರದೇಶದಲ್ಲಿ ಸೋಮು ಎಂಬಾತನೇ ಗ್ಯಾಂಬ್ಲಿಂಗ್ ದಂಧೆಯನ್ನ ಮುಂದುವರೆಸಿದ್ದು, ಕೆಲವು ಪೊಲೀಸರಿಗೆ ಆಮದನಿ ನೀಡುತ್ತಿದ್ದಾನೆಂದು ಹೇಳಲಾಗಿದೆ.
ಲಾಕ್ ಡೌನ್ ಸಮಯದಲ್ಲಿಯೂ ಮನೆ ಮುರುಕತನಕ್ಕೆ ಮುಂದಾಗಿರುವ ಇಂತವರಿಗೆ ‘161’ ಅಲ್ಲದವರು ಕ್ರಮವನ್ನ ಜರುಗಿಸಬೇಕಾಗಿದೆ. ಇಲ್ಲದಿದ್ದರೇ, ದಕ್ಷ ಅಧಿಕಾರಿಗಳ ಮಾನ ಹೋಗುವುದು ಖಚಿತವೆಂದು ಹೇಳಲಾಗುತ್ತಿದೆ.
ಸೋಮು ಎಂಬಾತನ ಥರದವರೇ ಧಾರವಾಡದಲ್ಲಿ ಅಂದರ್-ಬಾಹರ್ ಹೆಚ್ಚಾಗುತ್ತಿದ್ದು, ಅದ್ಯಾವಾಗ ಕಡಿವಾಣ ಹಾಕುತ್ತಾರೋ ಕಾದು ನೋಡಬೇಕಿದೆ.