ಧಾರವಾಡದಲ್ಲಿ ಬೆಂಕಿ…!

ಧಾರವಾಡ: ನಗರದ ಟಿಪ್ಪು ಸುಲ್ತಾನ ವೃತ್ತದ ಬಳಿಯಲ್ಲಿನ ಆಯಿಲ್ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಬೆಂಕಿಯನ್ನ ನಂದಿಸುವ ಕಾರ್ಯ ನಡೆದಿದೆ.
ಶಾಕ್ ಸರ್ಕೀಟ್ ನಿಂದ ಬೆಂಕಿ ತಗುಲಿರಬಹುದೆಂದು ಹೇಳಲಾಗಿದ್ದು, ಬೆಳಿಗ್ಗೆ ಅಂಗಡಿ ಬಳಿ ಬಂದಾಗ, ದುರ್ಘಟನೆ ಸಂಭವಿಸಿದೆ. ಪಕ್ಕದಲ್ಲಿದ್ದ ಯಾವುದೇ ಅಂಗಡಿಗಳಿಗೂ ಹಾನಿ ಆಗದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಸಾವಿರಾರೂ ರೂಪಾಯಿ ಮೌಲ್ಯದ ಆಯಿಲ್ ಸುಟ್ಟು ಹೋಗಿದ್ದು, ಅಂದಾಜು ಮೌಲ್ಯವನ್ನ ಕ್ರೋಡಿಕರಿಸಲಾಗುತ್ತಿದೆ. ಸುಮಾರು ಹೊತ್ತಿನವರೆಗೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಲೇ ಇತ್ತು.