ಧಾರವಾಡದಲ್ಲಿ ರೇಪ್ ಆ್ಯಂಡ್ ಮರ್ಡರ್- ಯೂನಿವರ್ಸಿಟಿಯಲ್ಲಿ ಸೆಕ್ಸ್.. ದೋಖಾ…!

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ನೌಕರರನ್ನ ಫುಸಲಾಯಿಸಿ ಗೋವಾಗೆ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿ, ಅಪಘಾತಪಡಿಸಿ ಕೊಲೆ ಮಾಡಲಾಗಿದೆ ಎಂದು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಕುಲಪತಿಯ ಆಪ್ತ ಸಹಾಯಕ ಮನಸೂರ ಮುಲ್ಲಾ ಹಾಗೂ ಕೃಷಿ ವಿಶ್ವವಿದ್ಯಾಲಯದ ಸ್ಟೇನೋಗ್ರಾಫರ್ ಉಳವಪ್ಪ ಮೇಸ್ತ್ರಿ ಮೇಲೆ ಐಪಿಸಿ 1860 (ಯು/ಎಸ್- 354(ಎ), 376, 302, 34) ಪ್ರಕರಣವನ್ನ ದಾಖಲು ಮಾಡಲಾಗಿದೆ.

ಧಾರವಾಡ ಶುಕ್ರವಾರ ಪೇಟೆ ಜೋಶಿ ಗಲ್ಲಿ ಮೇಘನಾ ಶೇತವಾಜಿ ಸಿಂಗನಾಥ ಹಾಗೂ ಧಾರವಾಡ ರೇಖಾ ಕೊಕಟನೂರ ಅವರನ್ನ ದುರ್ಬಳಕೆ ಮಾಡಿಕೊಂಡು ಕೊಲೆ ಮಾಡಲಾಗಿದೆ ಎಂದು ಪ್ರತಿಭಾ ಶಿವಾಜಿ ಗೊಂದಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಉಪನಗರ ಠಾಣೆ ಪೊಲೀಸರು, ತನಿಖೆಯನ್ನ ನಡೆಸಲು ಮುಂದಾಗಿದ್ದಾರೆ. ಸಾಕಷ್ಟು ಗೊಂದಲ ಮೂಡಿಸಿದ್ದ ಪ್ರಕರಣವೀಗ ಬೇರೆಯದ್ದೆ ಮಜಲನ್ನ ಪಡೆದಿದ್ದು, ಸತ್ಯಾಸತ್ಯತೆ ಹೊರಬೀಳಬೇಕಿದೆ.