Posts Slider

Karnataka Voice

Latest Kannada News

ಪೋರ್ಡ್ ಐಕಾನ್ ಕಾರಲ್ಲಿ “ದಾರೂ”: ನರೇಂದ್ರ ಕ್ರಾಸ್ ದಾಳಿ ನಡೆದದ್ದು ಹೇಗೆ ಗೊತ್ತಾ…!?

Spread the love

ಧಾರವಾಡ: ನಗರದ ಹೊರವಲಯದ ನರೇಂದ್ರ ಕ್ರಾಸ್ ಬಳಿಯ ಹುಬ್ಬಳ್ಳಿ-ಧಾರವಾಡ ಬೈಪಾಸ್ ಟೋಲ್ ಬಳಿಯಲ್ಲಿ ಪೋರ್ಡ್ ಐಕಾನ್ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 69000 ರೂಪಾಯಿ ಮೌಲ್ಯದ 20 ಲೀಟರ್ ನ 16 ಪ್ಲಾಸ್ಟಿಕ್ ಕ್ಯಾನಗಳಲ್ಲಿದ್ದ 320 ಲೀಟರ್ ಮದ್ಯಸಾರ ಮತ್ತು ಪ್ಲಾಸ್ಟಿಕ್ ಕ್ಯಾರಿಬ್ಯಾಗಿನಲ್ಲಿದ್ದ 25 ಲೀಟರ್ ಮದ್ಯವನ್ನ ವಶಕ್ಕೆ ಪಡೆಯಲಾಗಿದ್ದು, ಇದನ್ನ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಹಳೇಹುಬ್ಬಳ್ಳಿಯ ಚೆನ್ನಬಸವ ಸಾಲಿಮಠ ಅಲಿಯಾಸ್ ರಾಜು ಚಿಕ್ಕಮಠ ಎಂಬ ಚಾಲಕನನ್ನ ಬಂಧನ ಮಾಡಲಾಗಿದೆ.

ಪ್ರಕರಣದಲ್ಲಿರುವ ಸೆಟ್ಲಮೆಂಟಿನ ಸುನೀಲ ಶಂಕರ ಬಳ್ಳಾರಿ ಹಾಗೂ ವಾಹನದ ಮಾಲೀಕ ಬಾಂಬೆಯ ರಾಮು ಗಾಯಕವಾಡ ವಿರುದ್ಧವೂ ಪ್ರಕರಣ ದಾಖಲು ಮಾಡಿ, ಅವರಿಗಾಗಿ ಶೋಧ ಆರಂಭಿಸಿದ್ದಾರೆ.

ಅಬಕಾರಿ ಉಪ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ, ಪೇದೆಗಳಾದ ಜಾನ್ ವರ್ಗೀಸ್, ಎಸ್.ವಿ.ಕಮ್ಮಾರ, ಎಸ್.ಜಿ.ಮುಜಾವರ, ರವಿಕುಮಾರ ಬಿಳಕಾರ, ಬಲವಂತ ಫಡಕೆ ದಾಳಿಯಲ್ಲಿ ಭಾಗಿಯಾಗಿದ್ದರು.


Spread the love

Leave a Reply

Your email address will not be published. Required fields are marked *