ಧಾರವಾಡದ ಶಿಕ್ಷಣ ಇಲಾಖೆ ಸ್ಥಿತಿಯೂ “ಕುಂಟ ಕೋಣ ಮೂಖ ಜಾಣ” ನಾಟಕವೂ…!!!

ಧಾರವಾಡ: ಜಿಲ್ಲೆಯ ಶಿಕ್ಷಣ ಇಲಾಖೆಯ ವ್ಯವಸ್ಥೆಯು ಬಹಳಷ್ಟು ಜನಪ್ರಿಯತೆ ಪಡೆದಿರುವ ಕುಂಟ ಕೋಣ ಮೂಖ ಜಾಣ ನಾಟಕವನ್ನ ಸಂಪೂರ್ಣವಾಗಿ ಹೋಲುತ್ತಿದೆ ಎಂದು ಶಿಕ್ಷಣಪ್ರೇಮಿಗಳು ಆಡಿಕೊಳ್ಳುವ ಸ್ಥಿತಿ ಬಂದಿದೆ.
ಹೌದು… ಶಿಕ್ಷಣ ಇಲಾಖೆಯ ಪ್ರಮುಖ ಸ್ಥಾನದಲ್ಲಿ ಕೂತಿರುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಮೂಖ ಜಾಣರಂತೆ ವರ್ತಿಸುತ್ತಿದ್ದು, ಇನ್ನುಳಿದವರು ಹೇಳುತ್ತ ಹೋಗುವುದೇ ಆಗಿದೆ ಹೊರತು ಸುಧಾರಣೆ ಶೂನ್ಯ.
ಇನ್ನೊಂದು ತಿಂಗಳು ಪರೀಕ್ಷೆ ಉಳಿದಿಲ್ಲ. ಈಗ ಎಸ್ಎಸ್ಎಲ್ಸಿ ಪರೀಕ್ಷೆಯ ಸಿರಿಯಸ್ನೇಸ್ ಬಂದಿದೆ. ಜಾಣರಾಗಿರುವ ಕೆಳದಿಮಠ ಅವರು “ಪಾಪ… ಬಹಳ ಒಳ್ಳೆಯವರು” ಉತ್ತರ ನೀಡಿ ಜಾರಿಕೊಂಡಿದ್ದಾರೆ.
ಸಭೆಯಲ್ಲಿ ಈ ಬಗ್ಗೆ ತೀವ್ರ ಬೇಸರಿಸಿಕೊಂಡ ಸಚಿವ ಸಂತೋಷ ಲಾಡ ಅವರು, ‘ಸುಧಾರಣೆಯಾಗಲು ಎಲ್ಲರನ್ನೂ ಸೇರಿಸಿಕೊಳ್ಳಿ’ ಎಂದಿದ್ದಾರೆ. ಜಾಣ ಡಿಡಿಪಿಐ ಅವರು ಸಭೆಯಲ್ಲಿ ‘ತಲೆಯಾಡಿಸಿ’ ಜಾಣರಾಗಿ ಬಂದಿದ್ದಾರೆ.
ಮುಂದುವರೆದು ಮತ್ತೆ “ಕುಂಟ ಕೋಣ ಮೂಖ ಜಾಣ” ಆರಂಭವಾಗಲಿದೆ. ಕೇಳಿದವರು ಮರೆಯುತ್ತಾರೆ, ಕೇಳಿಸಿಕೊಂಡವರೂ ‘ಪಾಪ.. ಒಳ್ಳೆಯವರು’ ಎನಿಸಿಕೊಳ್ಳುತ್ತ ಈ ವರ್ಷವನ್ನ ಇದೇ ಅಧಿಕಾರದಲ್ಲಿ ಮುನ್ನಡೆಯುತ್ತಾರೆ…